ಕುಂದಾಪುರ

ಯಾವುದೇ ಪ್ರಚಾರ ಬಯಸದ ತೆರೆಯಮರೆಯ ಹೆಸರೆ ಹೇಳದ ಸರಳ ಸಜ್ಜನ ಸಮಾಜ ಸೇವಕ ಅಜಾದಿ ಗಿರೀಶ್ ಕೊಡಪಾಡಿ

Share

ಕುಂದಾಪುರ:ಇಂದು ನಾವು ಇರ್ತಿವಿ ನಾಳೆ ಹೋಗ್ತೀವಿ ಆದರೆ ನಮ್ಮ ಹೆಸರು ಮತ್ತು ಮಾಡಿದ ಕೆಲಸವು ಜೀವಂತ ಇರಬೇಕು ಅನ್ನುತ್ತಾರೆ…*
11 ವರ್ಷಗಳಿಂದ ದೇಶ ಸೇವೆಯೇ ಈಶಾ ಸೇವೆ ಎಂದು ತನ್ನ ಜೀವನವನ್ನೇ ದೇಶ ಧರ್ಮಕ್ಕಾಗಿ ಸಮರ್ಪಿಸುತ್ತ ಸವೆಯುತ್ತ ರಾಷ್ಟ್ರೀಯ ಸ್ವಯಂ ಸೇವಕನಾಗಿ ರಾಜ್ಯದ ಜಿಲ್ಲೆ ತಾಲೂಕು ಊರೂರು ಕೇರಿ ಅಲೆಯುತ್ತಾ ನಮ್ಮ ಹಿಂದು ಸಮಾಜ ಜಾಗ್ರತಗೊಳಿಸುತ್ತ ನಿರಂತರ ಜನರ ಸೇವೆ ಮಾಡುತ್ತಾ ಬಂದಿದ್ದಾರೆ…
ಇಂತಹ ಒಬ್ಬ ನಮ್ಮೂರಿನ ಸಮಾಜ ಸೇವಕನನ್ನು ಅವರ ಸೇವೆಯನ್ನು ನಾವು ಗುರುತಿಸಲೇಬೇಕೆಂಬ ಉದ್ದೇಶದಿಂದ ಅವರ ಈ ಕಿರುಪರಿಚಯ👇
ಸರಕಾರಿ ಶಾಲೆಯಲ್ಲಿ ಕಲಿತವನು ಮಾತ್ರ ಪರಿಪೂರ್ಣ ಉತ್ತಮ ಸಾಮಾಜಿಕ ಕಾರ್ಯಕರ್ತನಾಗಬಲ್ಲ ಯಾಕೆಂದರೆ ಅವನು ಮಾತ್ರ ಸಮಾಜದ ಅಳ ಅಗಲ ಕಷ್ಟ ಸುಖ ನೋವು ನಲಿವುಗಳನ್ನು ಸಮಾಜದ ಚಿತ್ರಣವನ್ನು ಅರಿತುಕೊಂಡಿರುತ್ತಾನೆ ಎಂಬುದಕ್ಕೆ ನಮ್ಮ ಗಿರೀಶ್ ರೇ ಉತ್ತಮ ಉದಾಹರಣೆ.
ಎಲ್ಲವೂ ಉಚಿತವಾಗಿ ಕೊಟ್ಟು ವಿದ್ಯೆ ಕಲಿಸಿದ ದೇಶಕ್ಕೆ ತಾನು ಏನಾದರೂ ಋಣ ತೀರಿಸಬೇಕೆಂಬ ತುಡಿತ ಅವರಲ್ಲಿದೆ.

ಹಲವು ವರ್ಷಗಳಿಂದ ನಮ್ಮ ಶಾಲೆ ಉಳಿವಿನ ಹೋರಾಟಕ್ಕೆ ನಾವುಗಳು ಬಹಳಷ್ಟು ಶ್ರಮಿಸಿದ್ದೇವೆ ಈ ಹೋರಾಟಕ್ಕೆ ನಮ್ಮ ಆತ್ಮೀಯ ಗಿರೀಶ್ ರವರ ಆಗಮನದಿಂದ ಅವರ ಅರ್ಥಿಕ ಸಹಕಾರದಿಂದ ನಮಗೆ ಆನೆ ಬಲಬಂದಂತಾಗಿದೆ.

ಆರಂಭದಲ್ಲಿ ಕಂಚುಗೋಡಿನ ನಮ್ಮ ಶಾಲೆ ವೇದಿಕೆಯಲ್ಲಿ ಗಿರೀಶ್ ಕೊಡಪಾಡಿ ಹೇಳಿದಾಗೆ, “ಹೆತ್ತ ತಾಯಿ, ಹೊತ್ತ ಭೂಮಿ, ಕಲಿತ ಶಾಲೆಯ ಋಣ ತೀರಿಸಲು ಸಾಧ್ಯವಿಲ್ಲ ಆದರೆ ನನ್ನ ಶಾಲೆಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕರ ಸಹಾಯ ಶಕ್ತಿಮಿರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ ಕ್ಷಣದಿಂದಲೇ ಮಾತಿಗೆ ತಪ್ಪದೇ ಬರೀ ಆಶ್ವಾಸನೆ ಆಗದೆ ಆರಂಭದಲ್ಲಿ ಗಿರೀಶ್ ರವರು ತನ್ನ ಶಾಲಾ ಮಕ್ಕಳಿಗೆ ಪೆನ್ನು ಪುಸ್ತಕ ಕಲಿಕೆ ಸಾಮಾಗ್ರಿಗಳನ್ನು ನೀಡಿದರು.
ನಂತರ ಮತ್ತೆ ತನ್ನಿಂದ ಮತ್ತು ತನ್ನ ಪರಿಚಯಸ್ಥ ಉದ್ಯಮಿ ಮತ್ತು ಶಾಸಕರಿಂದ ಅವರ ಬೆನ್ನುಬೀಡದೇ ನಮ್ಮ ಕಂಚುಗೋಡು ಶಾಲೆ ಮಕ್ಕಳಿಗೆ ಸ್ಮಾರ್ಟ್ ಕ್ಲಾಸಿಗಾಗಿ ಎರಡು ಕಂಪ್ಯೂಟರ್ ಮತ್ತು ಸಲಕರಣೆಗಳು, ಕಂಚುಗೋಡು ಅಂಗನವಾಡಿ ಸೇರಿ ಒಟ್ಟು ನಾಲ್ಕು ಅಂಗನವಾಡಿ ಮತ್ತು ಕಂಚುಗೋಡು ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ 200 ಶಾಲಾ ಬ್ಯಾಗ್ ಕೊಟ್ಟಿದ್ದಾರೆ, 80 ಮಕ್ಕಳಿಗೆ ಸ್ಪೋರ್ಟ್ಸ್ ಟೀ-ಶಾರ್ಟ್ ಚಡ್ಡಿ ಮತ್ತು 25 ಸಾವಿರದ ಮೌಲ್ಯದ ಕ್ರೀಡಾ ಸಾಮಾಗ್ರಿಗಳು ನೀಡಿದ್ದಾರೆ ಮತ್ತು ಬೆಂಗಳೂರಿನಿಂದ ಆತ್ಮೀಯ ಶಾಸಕರಿಂದ ರೂ.5 ಲಕ್ಷ ತಂದು ಮೇಲ್ಚಾವಣಿ ಕಟ್ಟಡವನ್ನು ಕೂಡ ನಿರ್ಮಿಸಿಕೊಟ್ಟಿದ್ದಾರೆ ಅದು ನಾಳೆ ಶಾಸಕರಿಂದ ಅಥವಾ ಇವರಿಂದಲೇ ಉದ್ಘಾಟನೆಯಿದೆ ಹಾಗೇ ಮುಂದೆ ನಮ್ಮ ಕನಸಿನ ಕೂಸು ಶಾಲೆ ಆವರಣ ಗೋಡೆ ಮತ್ತು ಶಾಲಾ ವಾಹನವನ್ನು ತೆಗೆಸಿಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ ಹೇಳಿದ್ದನ್ನು ಮಾಡಿಯೇ ತಿರುತ್ತಾರೆ ಎಂಬ ನಂಬಿಕೆ ನಮಗಿದೆ, ಇಷ್ಟೇ ಅಲ್ಲದೇ ಮುಂದೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತೇನೆ ಜೊತೆಗಿರುತ್ತೇನೆ ಎಂದು ಹೇಳಿದ್ದು ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ…

ಇದಕ್ಕಿಂತ ಹಿಂದೆ ಕೂಡ ತನ್ನೂರಿಗೆ ಕೊಡಪಾಡಿ ಶಾಲೆಗೆ ವಿವೇಕ ಕೊಠಡಿ, ಭಾಸ್ಕರ ಪೈ ಶಾಲೆಗೆ ರೋಡ್, ಕೊಡಪಾಡಿಯಿಂದ ಗುಹೇಶ್ವರ ರೋಡ್, ಗುಹೇಶ್ವರ ಭಧ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ 25 ಲಕ್ಷ ಅನುದಾನ ತೆಗೆಸಿಕೊಟ್ಟಿದ್ದಾರೆ. ಹೇಳಿದರೆ ಅನುದಾನದ ಸರಮಾಲೆ ಬಹಳಷ್ಟಿದೆ, ಅಂಗವಿಕಲ ಅಶಕ್ತನಿಗೆ ಹೊಲಿಗೆ ಯಂತ್ರ ನೀಡಿದ್ದು ತನ್ನ ಹೃದಯ ವೈಶಾಲ್ಯತೆ ತೋರುತ್ತದೆ ಹೀಗೆಯೇ ನಮಗೆ ಗೊತ್ತಿಲ್ಲದೇ ತೆರೆಯಮರೆಯಲ್ಲಿ ನಿಂತು ತನ್ನ ಊರಿಗೆ ಶಾಲೆಗೆ ಮಾಡಿದ ದೊಡ್ಡಮಟ್ಟದ ಅರ್ಥಿಕ ಸಹಾಯ ಕೆಲಸಗಳು ಬಹಳಷ್ಟಿದೆ…!!
*ಇಂತಹ ಒಬ್ಬ ಸಮಾಜ ಸೇವಕ ಶಾಲೆಗೊಬ್ಬ ಊರಿಗೊಬ್ಬರು ಇರಲಿ ನೀವು ಇನ್ನೂ ಉತ್ತರೊತ್ತರಕ್ಕೆ ಬೆಳೆದು ಊರಿಗೆ ಬೆಳಕಾಗಲಿ ಶ್ರೀ ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಆಶೀರ್ವದಿಸಲಿ ಎಂದು ಆಶೀಸುತ್ತೇನೆ.

            *- ಹೆಬ್ಬುಲಿ ರಮ್ಮಿ*
Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

4 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago