ಕುಂದಾಪುರ

ನಾಗನಿಗೆ ಹಣ್ಣು ಕಾಯಿ,ತನು ಸೇವೆ ಅರ್ಪಿಸಿದ ಭಕ್ತರು

Share

Advertisement
Advertisement

ಕುಂದಾಪುರ:ಪರಶುರಾಮ ಸೃಷ್ಟಿಯ ನೆಲದಲ್ಲಿ ನಾಗನಿಗೆ ಅಗ್ರಸ್ಥಾನವಿದೆ.ನಾಗ ದೇವರ ಪೂಜೆ ಮಾಡಲು ಮಡಿ ಮೈಲಿಗೆ ಅತ್ಯವಶ್ಯಕ.ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಗ ದೇವರ ಶಿಲೆಯನ್ನು ಮುಟ್ಟಿ ಪೂಜೆ ಮಾಡಿದರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಿಟ್ಟರೆ ಬೇರೆ ಯಾವ ಜಾತಿಗೂ ನಾಗ ಶಿಲೆಯನ್ನು ಮುಟ್ಟಿ ಪೂಜೆ ಮಾಡುವುದು ನಿಷಿದ್ಧ.ಇಲ್ಲಿನ ಪ್ರತಿ ಕುಟುಂಬಕ್ಕೂ ಮೂಲ ನಾಗ ದೇವರಿದ್ದು ಸಂತಾನ ಕಾರಕನೆಂದೆ ಪೂಜಿಸಲಾಗುತ್ತದೆ.ನಾಗರ ಪಂಚಮಿ ಹಬ್ಬದ ದಿನದಂದು ಮೂಲ ನಾಗನಿಗೆ ಹಣ್ಣು ಕಾಯಿ ಸೇವೆ ನೀಡಿ ತನು ಹಾಕಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದು ಬಂದಂತಹ ಪದ್ದತಿ.
ನಾಗನಿಗೆ ತನು ಸೇವೆ ಅರ್ಪಣೆ ಮಾಡಲು ಸೀಯಾಳ ಬಾಳೆಹಣ್ಣು ಅವಶ್ಯಕವಾಗಿದ್ದು ಸೀಯಾಳ ಮತ್ತು ಬಾಳೆ ಹಣ್ಣಿನ ಬೆಲೆ ದುಬಾರಿ ಆಗಿದೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಸೀಯಾಳಕ್ಕೆ ಬೇಡಿಕೆ ಕಡಿಮೆ ಇರುತ್ತದೆ.ಆದರೂ ಸೀಯಾಳದ ಬೆಲೆ ಬೇಸಿಗೆ ತಿಂಗಳಿನಷ್ಟೆ ಇದೆ.ಮಾರುಕಟ್ಟೆಯಲ್ಲಿ ಸೀಯಾಳವನ್ನು 40 ರಿಂದ 50.ರೂ ವರೆಗೆ ಮಾರಾಟ ಮಾಡಲಾಗುತ್ತಿದೆ.ಬಾಳೆ ಹಣ್ಣು ಕೆ.ಜಿ ಒಂದರ ಬೆಲೆ 60 ರಿಂದ 70.ರೂ ಇದೆ.ಧಾರಕಾರವಾಗಿ ಮಳೆ ಸುರಿದಿದ್ದರು ಈ ಸಲ ಮಳೆಗಾಲದಲ್ಲಿ ಸೀಯಾಳದ ಬೆಲೆ ಇಳಿಕೆ ಆಗಿಲ್ಲ.ತೆಂಗು ಬೆಳೆ ಕೊರತೆ ಯಿಂದಾಗಿ ಸೀಯಾಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಬೆಲೆ ಮಳೆಗಾಲದಲ್ಲಿಯೂ ಇಳಿದಿಲ್ಲ ಎಂದು ಅಂಗಡಿ ಅವರು ಸೀಯಾಳ ದರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಹೂವಿನ ದರ ಸ್ವಲ್ಪ ಮಟ್ಟಿಕೆ ಕಡಿಮೆ ಇದ್ದರೂ,ಸೀಯಾಳ ಮತ್ತು ಬಾಳೆ ಹಣ್ಣಿನ ದರ ಭಕ್ತರ ಕೈಗೆ ಬಿಸಿ ಮುಟ್ಟಿಸಿದೆ.
ನಾಗನಿಗೆ ತನು ಸೇವೆ ಅರ್ಪಿಸಿದ ಭಕ್ತರು:ಶ್ರಾವಣ ಮಾಸದಲ್ಲಿ ಆಚರಣೆ ಮಾಡುವ ನಾಗರ ಪಂಚಮಿ ಹಬ್ಬ ಹಿಂದೂ ಬಾಂಧವರಿಗೆ ಪ್ರಮುಖವಾದ ಹಬ್ಬವಾಗಿದೆ.ದೇಶದ ನಾನಾ ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನಾಗರ ಪಂಚಮಿ ಹಬ್ಬ ಎಷ್ಟು ಪ್ರಾಮೂಖ್ಯವೊ ಉತ್ತರ ಕನ್ನಡದ ಭಾಗದ ಜನರಿಗೂ ಅಷ್ಟೆ ಪ್ರಮುಖವಾದ ಹಬ್ಬವಾಗಿದೆ.
ನಾಗರ ಪಂಚಮಿ ಹಬ್ಬ ಸನಿಹಾಕ,ಅಣ್ಣ ಬರಲಿಲ್ಲಾ ಇನ್ನೂ ಕರಿಲಾಕಾ ಎಂಬ ಜಾನಪದ ಹಾಡು ಬಹಳಷ್ಟು ಜನಪ್ರೀತಿ ಗಳಿಸಿದೆ.ಈ ಜಾನಪದ ಹಾಡು ಉತ್ತರ ಕನ್ನಡದಲ್ಲಿ ಆಚರಿಸಲ್ಪಡುವ ಪಂಚಮಿ ಹಬ್ಬದ ಮಹತ್ವವನ್ನು ಸಾರಿ ಹೇಳುತ್ತದೆ.ಆಷಾಢ ಮಾಸ ಮುಗಿದು ಶ್ರಾವಣ ಮಾಸ ಕಾಲಿಡುತ್ತಲೆ ಹಬ್ಬಗಳ ಸರಣಿ ಆರಂಭಗೊಳ್ಳುತ್ತದೆ.

Advertisement

@ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement
Advertisement

Share
Team Kundapur Times

Recent Posts

ಮೋದಿ ಹುಟ್ಟು ಹಬ್ಬ,ಉಚಿತ ಆಟೋ ಸೇವೆ

ಕುಂದಾಪುರ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಮೋದಿ ಅಭಿಮಾನಿ ಉದಯ ಖಾರ್ವಿ ಅವರು ತ್ರಾಸಿ ಮತ್ತು…

10 hours ago

ಉದ್ಯಮಿ ಎನ್.ರಮೇಶ ದೇವಾಡಿಗ ವಂಡ್ಸೆಗೆಸಾಧನಾಶ್ರೀ ಪ್ರಶಸ್ತಿ ಪ್ರದಾನ

ಕುಂದಾಪುರ:ಎನ್.ರಮೇಶ ದೇವಾಡಿಗ ವಂಡ್ಸೆ 2004ರಲ್ಲಿ ಬೆಂಗಳೂರಿನಲ್ಲಿ ಹಿಂಡ್ ಪ್ಯಾಕ್ ಕಂಪನಿಯನ್ನು ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿ,ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ…

10 hours ago

ಸಂಬಂಧಿ ಮಹಿಳೆಯೊಬ್ಬರಿಗೆ ಯಕೃತ್ತು ದಾನ ಮಾಡಿ, ಇಹಲೋಕ ತ್ಯಜಿಸಿದ ಮಹಿಳೆ

ಕುಂದಾಪುರ: ಅನಾರೋಗ್ಯ ಪೀಡಿತರಾದ ಕುಟುಂಬದಲ್ಲಿನ ಸಂಬಂಧಿ ಮಹಿಳೆಯೊಬ್ಬರಿಗೆ ಯಕೃತ್ತು ದಾನ ಮಾಡಿದ ಅಂಕಿತಾ (ಅರ್ಚನಾ) ಕಾಮತ್ ಅವರು ಅನಾರೋಗ್ಯ ಪೀಡಿತರಾಗಿ…

18 hours ago

ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಕುಂದಾಪುರ ನೂತನ ಕಾರ್ಯಕಾರಿ ಸಮಿತಿ ಆಯ್ಕೆ

ಕುಂದಾಪುರ:ಸುಮಾರು 96 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಅಂಡ್ ರೀಡಿಂಗ್ ರೂಮ್ ಸೊಸೈಟಿ (ರಿ) ಕುಂದಾಪುರ ಅದರ…

2 days ago

ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ

ಕುಂದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಉಡುಪಿ ಅದರ ಆಲೂರು ಶಾಖೆ ನೂತನ ಪದಾಧಿಕಾರಿಗಳ…

2 days ago

ಶೋಷಿತರ ಸ್ವಾಭಿಮಾನಿ ಸಮಾವೇಶ,ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕುದಾಪುರ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ),ಜಿಲ್ಲಾ ಸಮಿತಿ ಉಡುಪಿ,ಕುಂದಾಪುರ ತಾಲೂಕು ಸಮಿತಿ ವತಿಯಿಂದ ಶೋಷಿತರ ಸ್ವಾಭಿಮಾನಿ ಸಮಾವೇಶ…

2 days ago