ಕುಂದಾಪುರ

ನಾಗನಿಗೆ ಹಣ್ಣು ಕಾಯಿ,ತನು ಸೇವೆ ಅರ್ಪಿಸಿದ ಭಕ್ತರು

Share

Advertisement
Advertisement
Advertisement

ಕುಂದಾಪುರ:ಪರಶುರಾಮ ಸೃಷ್ಟಿಯ ನೆಲದಲ್ಲಿ ನಾಗನಿಗೆ ಅಗ್ರಸ್ಥಾನವಿದೆ.ನಾಗ ದೇವರ ಪೂಜೆ ಮಾಡಲು ಮಡಿ ಮೈಲಿಗೆ ಅತ್ಯವಶ್ಯಕ.ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಗ ದೇವರ ಶಿಲೆಯನ್ನು ಮುಟ್ಟಿ ಪೂಜೆ ಮಾಡಿದರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಿಟ್ಟರೆ ಬೇರೆ ಯಾವ ಜಾತಿಗೂ ನಾಗ ಶಿಲೆಯನ್ನು ಮುಟ್ಟಿ ಪೂಜೆ ಮಾಡುವುದು ನಿಷಿದ್ಧ.ಇಲ್ಲಿನ ಪ್ರತಿ ಕುಟುಂಬಕ್ಕೂ ಮೂಲ ನಾಗ ದೇವರಿದ್ದು ಸಂತಾನ ಕಾರಕನೆಂದೆ ಪೂಜಿಸಲಾಗುತ್ತದೆ.ನಾಗರ ಪಂಚಮಿ ಹಬ್ಬದ ದಿನದಂದು ಮೂಲ ನಾಗನಿಗೆ ಹಣ್ಣು ಕಾಯಿ ಸೇವೆ ನೀಡಿ ತನು ಹಾಕಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದು ಬಂದಂತಹ ಪದ್ದತಿ.
ನಾಗನಿಗೆ ತನು ಸೇವೆ ಅರ್ಪಣೆ ಮಾಡಲು ಸೀಯಾಳ ಬಾಳೆಹಣ್ಣು ಅವಶ್ಯಕವಾಗಿದ್ದು ಸೀಯಾಳ ಮತ್ತು ಬಾಳೆ ಹಣ್ಣಿನ ಬೆಲೆ ದುಬಾರಿ ಆಗಿದೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಸೀಯಾಳಕ್ಕೆ ಬೇಡಿಕೆ ಕಡಿಮೆ ಇರುತ್ತದೆ.ಆದರೂ ಸೀಯಾಳದ ಬೆಲೆ ಬೇಸಿಗೆ ತಿಂಗಳಿನಷ್ಟೆ ಇದೆ.ಮಾರುಕಟ್ಟೆಯಲ್ಲಿ ಸೀಯಾಳವನ್ನು 40 ರಿಂದ 50.ರೂ ವರೆಗೆ ಮಾರಾಟ ಮಾಡಲಾಗುತ್ತಿದೆ.ಬಾಳೆ ಹಣ್ಣು ಕೆ.ಜಿ ಒಂದರ ಬೆಲೆ 60 ರಿಂದ 70.ರೂ ಇದೆ.ಧಾರಕಾರವಾಗಿ ಮಳೆ ಸುರಿದಿದ್ದರು ಈ ಸಲ ಮಳೆಗಾಲದಲ್ಲಿ ಸೀಯಾಳದ ಬೆಲೆ ಇಳಿಕೆ ಆಗಿಲ್ಲ.ತೆಂಗು ಬೆಳೆ ಕೊರತೆ ಯಿಂದಾಗಿ ಸೀಯಾಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದರಿಂದ ಬೆಲೆ ಮಳೆಗಾಲದಲ್ಲಿಯೂ ಇಳಿದಿಲ್ಲ ಎಂದು ಅಂಗಡಿ ಅವರು ಸೀಯಾಳ ದರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಹೂವಿನ ದರ ಸ್ವಲ್ಪ ಮಟ್ಟಿಕೆ ಕಡಿಮೆ ಇದ್ದರೂ,ಸೀಯಾಳ ಮತ್ತು ಬಾಳೆ ಹಣ್ಣಿನ ದರ ಭಕ್ತರ ಕೈಗೆ ಬಿಸಿ ಮುಟ್ಟಿಸಿದೆ.
ನಾಗನಿಗೆ ತನು ಸೇವೆ ಅರ್ಪಿಸಿದ ಭಕ್ತರು:ಶ್ರಾವಣ ಮಾಸದಲ್ಲಿ ಆಚರಣೆ ಮಾಡುವ ನಾಗರ ಪಂಚಮಿ ಹಬ್ಬ ಹಿಂದೂ ಬಾಂಧವರಿಗೆ ಪ್ರಮುಖವಾದ ಹಬ್ಬವಾಗಿದೆ.ದೇಶದ ನಾನಾ ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನಾಗರ ಪಂಚಮಿ ಹಬ್ಬ ಎಷ್ಟು ಪ್ರಾಮೂಖ್ಯವೊ ಉತ್ತರ ಕನ್ನಡದ ಭಾಗದ ಜನರಿಗೂ ಅಷ್ಟೆ ಪ್ರಮುಖವಾದ ಹಬ್ಬವಾಗಿದೆ.
ನಾಗರ ಪಂಚಮಿ ಹಬ್ಬ ಸನಿಹಾಕ,ಅಣ್ಣ ಬರಲಿಲ್ಲಾ ಇನ್ನೂ ಕರಿಲಾಕಾ ಎಂಬ ಜಾನಪದ ಹಾಡು ಬಹಳಷ್ಟು ಜನಪ್ರೀತಿ ಗಳಿಸಿದೆ.ಈ ಜಾನಪದ ಹಾಡು ಉತ್ತರ ಕನ್ನಡದಲ್ಲಿ ಆಚರಿಸಲ್ಪಡುವ ಪಂಚಮಿ ಹಬ್ಬದ ಮಹತ್ವವನ್ನು ಸಾರಿ ಹೇಳುತ್ತದೆ.ಆಷಾಢ ಮಾಸ ಮುಗಿದು ಶ್ರಾವಣ ಮಾಸ ಕಾಲಿಡುತ್ತಲೆ ಹಬ್ಬಗಳ ಸರಣಿ ಆರಂಭಗೊಳ್ಳುತ್ತದೆ.

Advertisement

@ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement
Advertisement

Share
Team Kundapur Times

Recent Posts

ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…

3 days ago

ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ

ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…

4 days ago

ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…

1 week ago

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…

1 week ago

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…

1 week ago

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…

2 weeks ago