ಕುಂದಾಪುರ:ಬುಧವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಪಾಡಿ ಶ್ರೀಕೃಷ್ಣ ಕಾರಂತ್ ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೊಟ್ಟಿಗೆ ಒಳಗೆ ಮಲಗಿದ್ದ ಹಸು ದಾರುಣವಾಗಿ ಮೃತಪಟ್ಟಿದ ಘಟನೆ ನಡೆದಿದೆ.ಲಕ್ಷಾಂತರ.ರೂ ನಷ್ಟ ಉಂಟಾಗಿದೆ.
ಸುಂಟರಗಾಳಿ ಅಬ್ಬರಕ್ಕೆ ಗುಜ್ಜಾಡಿ ಗುಜ್ಜಾಡಿ ಜನತಾ ಕಾಲೋನಿ ನಿವಾಸಿ ಶೀನ ಬಿನ್ ವೆಂಕಟ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಹ ಹಾನಿ ಉಂಟಾಗಿದ್ದು ಅಂದಾಜು 40, ಸಾವಿರ.ರೂ ನಷ್ಟ ಸಂಭವಿಸಿದೆ.ಭಾರಿ ಗಾಳಿಗೆ ಮುತ್ತು ಅವರ ಮನೆ ತಗಡು ಶೀಟ್ ಹಾರಿ ಹೋಗಿದೆ ಸುಮಾರು 15 ಸಾವಿರ.ರೂ ನಷ್ಟ ಆಗಿದೆ.ಕಂಚುಗೋಡು ಭಾಗದ ನಿವಾಸಿ ಅಕ್ಕಮ್ಮ ಅವರ ದನ ಕೊಟ್ಟಿಗೆಗೆ ಹಾನಿ ಆಗಿದ್ದು 7,500.ರೂ ನಷ್ಟ ಉಂಟಾಗಿದೆ.ಜನತಾ ಕಾಲೋನಿ ನಿವಾಸಿ ಮುಕಾಂಬು ಅವರ ಮನೆ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ಮನೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು ಅಂದಾಜು 80 ಸಾವಿರ.ರೂ ನಷ್ಟ ಸಂಭವಿಸಿದೆ.ಗುಜ್ಜಾಡಿ ಮಾವಿನ ಕಟ್ಟೆ ಬಳಿ ನಿವಾಸಿ ಶ್ರೀಕೃಷ್ಣ ಕಾರಂತ ಅವರ ಮನೆ ಹಾಗೂ ದನದ ಕೊಟ್ಟಿಗೆ ಮೇಲೆ ಹುಣಸೆ ಮರ ಬಿದ್ದ ಪರಿಣಾಮ ತೀವ್ರವಾಗಿ ಹಾನಿ ಉಂಟಾಗಿದ್ದು ಒಂದು ಹಸು ಮೃತಪಟ್ಟಿದೆ ಘಟನೆಯಲ್ಲಿ ಅಂದಾಜು 1.50 ಲಕ್ಷ.ರೂ ನಷ್ಟ ಉಂಟಾಗಿದೆ.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…