ಕುಂದಾಪುರ:ಬುಧವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಪಾಡಿ ಶ್ರೀಕೃಷ್ಣ ಕಾರಂತ್ ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೊಟ್ಟಿಗೆ ಒಳಗೆ ಮಲಗಿದ್ದ ಹಸು ದಾರುಣವಾಗಿ ಮೃತಪಟ್ಟಿದ ಘಟನೆ ನಡೆದಿದೆ.ಲಕ್ಷಾಂತರ.ರೂ ನಷ್ಟ ಉಂಟಾಗಿದೆ.
ಸುಂಟರಗಾಳಿ ಅಬ್ಬರಕ್ಕೆ ಗುಜ್ಜಾಡಿ ಗುಜ್ಜಾಡಿ ಜನತಾ ಕಾಲೋನಿ ನಿವಾಸಿ ಶೀನ ಬಿನ್ ವೆಂಕಟ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಹ ಹಾನಿ ಉಂಟಾಗಿದ್ದು ಅಂದಾಜು 40, ಸಾವಿರ.ರೂ ನಷ್ಟ ಸಂಭವಿಸಿದೆ.ಭಾರಿ ಗಾಳಿಗೆ ಮುತ್ತು ಅವರ ಮನೆ ತಗಡು ಶೀಟ್ ಹಾರಿ ಹೋಗಿದೆ ಸುಮಾರು 15 ಸಾವಿರ.ರೂ ನಷ್ಟ ಆಗಿದೆ.ಕಂಚುಗೋಡು ಭಾಗದ ನಿವಾಸಿ ಅಕ್ಕಮ್ಮ ಅವರ ದನ ಕೊಟ್ಟಿಗೆಗೆ ಹಾನಿ ಆಗಿದ್ದು 7,500.ರೂ ನಷ್ಟ ಉಂಟಾಗಿದೆ.ಜನತಾ ಕಾಲೋನಿ ನಿವಾಸಿ ಮುಕಾಂಬು ಅವರ ಮನೆ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ಮನೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು ಅಂದಾಜು 80 ಸಾವಿರ.ರೂ ನಷ್ಟ ಸಂಭವಿಸಿದೆ.ಗುಜ್ಜಾಡಿ ಮಾವಿನ ಕಟ್ಟೆ ಬಳಿ ನಿವಾಸಿ ಶ್ರೀಕೃಷ್ಣ ಕಾರಂತ ಅವರ ಮನೆ ಹಾಗೂ ದನದ ಕೊಟ್ಟಿಗೆ ಮೇಲೆ ಹುಣಸೆ ಮರ ಬಿದ್ದ ಪರಿಣಾಮ ತೀವ್ರವಾಗಿ ಹಾನಿ ಉಂಟಾಗಿದ್ದು ಒಂದು ಹಸು ಮೃತಪಟ್ಟಿದೆ ಘಟನೆಯಲ್ಲಿ ಅಂದಾಜು 1.50 ಲಕ್ಷ.ರೂ ನಷ್ಟ ಉಂಟಾಗಿದೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…