ಕುಂದಾಪುರ:ಬುಧವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಪಾಡಿ ಶ್ರೀಕೃಷ್ಣ ಕಾರಂತ್ ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೊಟ್ಟಿಗೆ ಒಳಗೆ ಮಲಗಿದ್ದ ಹಸು ದಾರುಣವಾಗಿ ಮೃತಪಟ್ಟಿದ ಘಟನೆ ನಡೆದಿದೆ.ಲಕ್ಷಾಂತರ.ರೂ ನಷ್ಟ ಉಂಟಾಗಿದೆ.
ಸುಂಟರಗಾಳಿ ಅಬ್ಬರಕ್ಕೆ ಗುಜ್ಜಾಡಿ ಗುಜ್ಜಾಡಿ ಜನತಾ ಕಾಲೋನಿ ನಿವಾಸಿ ಶೀನ ಬಿನ್ ವೆಂಕಟ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಹ ಹಾನಿ ಉಂಟಾಗಿದ್ದು ಅಂದಾಜು 40, ಸಾವಿರ.ರೂ ನಷ್ಟ ಸಂಭವಿಸಿದೆ.ಭಾರಿ ಗಾಳಿಗೆ ಮುತ್ತು ಅವರ ಮನೆ ತಗಡು ಶೀಟ್ ಹಾರಿ ಹೋಗಿದೆ ಸುಮಾರು 15 ಸಾವಿರ.ರೂ ನಷ್ಟ ಆಗಿದೆ.ಕಂಚುಗೋಡು ಭಾಗದ ನಿವಾಸಿ ಅಕ್ಕಮ್ಮ ಅವರ ದನ ಕೊಟ್ಟಿಗೆಗೆ ಹಾನಿ ಆಗಿದ್ದು 7,500.ರೂ ನಷ್ಟ ಉಂಟಾಗಿದೆ.ಜನತಾ ಕಾಲೋನಿ ನಿವಾಸಿ ಮುಕಾಂಬು ಅವರ ಮನೆ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ಮನೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು ಅಂದಾಜು 80 ಸಾವಿರ.ರೂ ನಷ್ಟ ಸಂಭವಿಸಿದೆ.ಗುಜ್ಜಾಡಿ ಮಾವಿನ ಕಟ್ಟೆ ಬಳಿ ನಿವಾಸಿ ಶ್ರೀಕೃಷ್ಣ ಕಾರಂತ ಅವರ ಮನೆ ಹಾಗೂ ದನದ ಕೊಟ್ಟಿಗೆ ಮೇಲೆ ಹುಣಸೆ ಮರ ಬಿದ್ದ ಪರಿಣಾಮ ತೀವ್ರವಾಗಿ ಹಾನಿ ಉಂಟಾಗಿದ್ದು ಒಂದು ಹಸು ಮೃತಪಟ್ಟಿದೆ ಘಟನೆಯಲ್ಲಿ ಅಂದಾಜು 1.50 ಲಕ್ಷ.ರೂ ನಷ್ಟ ಉಂಟಾಗಿದೆ.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…