ಕುಂದಾಪುರ:ಕೆಡಿಸಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ.ಜಪಾನ್ ದೇಶದ ಕಾಂಗೆನ್ ಸಂಸ್ಥೆ ವಿಶ್ವದ ಸುಮಾರು 165 ದೇಶಗಳಲ್ಲಿ ಕಾರ್ಯಚರಿಸುತ್ತಿದೆ.ಸೇವೆಯಲ್ಲಿ ಉತ್ತಮ ದರ್ಜೆಯನ್ನು ಹೊಂದಿರುವ ಕೆಡಿಸಿ ಕಾಂಗೆನ್ ಸಂಸ್ಥೆ ಭಾರತದ ನಾನಾ ರಾಜ್ಯಗಳಲ್ಲಿ ತನ್ನ ಸಂಸ್ಥೆಯನ್ನು ಹೊಂದಿದ್ದು ಜನ ಪ್ರೀತಿಗೆ ಪಾತ್ರವಾಗಿದೆ.ವಾಸುದೇವ ಹೊಳ್ಳ ಅವರ ನೇತೃತ್ವದಲ್ಲಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಕೋಟೇಶ್ವರದಲ್ಲಿ ಶುಭಾರಂಭಗೊಂಡಿದ್ದು ಕಾಂಗೆನ್ ವಾಟರ್ ಮೆಷಿನ್ ಅನ್ನು ಪಡೆದುಕೊಳ್ಳಲು ಗ್ರಾಹಕರು ಅವರನ್ನು ಸಂಪರ್ಕಿಸಬಹುದು.
ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಕೋಟೇಶ್ವರ ವಾಸುದೇವ ಹೊಳ್ಳ ಅವರು ಮಾತನಾಡಿ,ವಿಶ್ವಾದ್ಯಂತ ಜನಪ್ರಿಯಗೊಂಡಿರುವ ಕಾಂಗೆನ್ ವಾಟರ್ನ್ನು ಸ್ವತ ತಾನು ಬಳಕೆ ಮಾಡಿದ್ದು ನೂರಕ್ಕೆ ನೂರಷ್ಟು ಫಲಿತಾಂಶ ಇದೆ.ಜನರಿಗೆ ಗುಣಮಟ್ಟದ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಕೋಟೇಶ್ವರದಲ್ಲಿ ಕಾಂಗೆನ್ ಡಿಸ್ಟ್ರಿಬ್ಯೂಟರ್ಸ್ ಸೆಂಟರ್ ಆರಂಭಿಸಲಾಗಿದೆ.ಕಛೇರಿಯಲ್ಲಿ ಪ್ರತಿ ಬುಧವಾರ ಕಾಂಗೆನ್ ವಾಟರ್ ಬಳಕೆ ಮತ್ತು ಪ್ರಯೋಜನಾ ಗುರಿತು ಮಾಹಿತಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಡಾ.ಶ್ರೀದೇವಿ ಕಟ್ಟೆ ಚಿನ್ಮಯಿ ಆಸ್ಪತ್ರೆ ಕುಂದಾಪುರ ಅವರು ಕಾಂಗೆನ್ ವಾಟರ್ ಕಚೇರಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ,ಒಳ್ಳೆ ಉದ್ದೇಶದೊಂದಿಗೆ ಆರಂಭಿಸಿರುವ ಇವೊಂದು ಉದ್ಯಮವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಾಹಾರೈಸಿದರು.
ರಾಜೇಶ್ ನಾಯರ್ ಅವರು ಕಾಂಗೆನ್ ವಾಟರ್ ಪ್ರಯೋಜನತೆ ಕುರಿತು ವಿವರಿಸಿ ಮಾತನಾಡಿ,ಎಲ್ಲಾ ಕಾಯಿಲೆಗಳಿಗೆ ನೀರು ಮದ್ದಾಗಿದೆ.ಶುದ್ಧವಾದ ನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ ಆಗಿದೆ.ನಮ್ಮ ಜೀವನದ ಕ್ರಮದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಹೇಳಿದರು.
ಗಣೆಶ್ ಅವರು ಪ್ರಾತ್ಯಾಕ್ಷತೆ ಮೂಲಕ ಕಾಂಗೆನ್ ವಾಟರ್ ಕುರಿತು ಮಾಹಿತಿ ನೀಡಿ ಮಾತನಾಡಿ,ಜಗತ್ತಿನಲ್ಲೆ ಅತ್ಯಂತ ಆರೋಗ್ಯ ಪೂರ್ಣತೆಯಿಂದ ಕೂಡಿದ ಕಾಂಗೆನ್ ವಾಟರ್ ಸಂಸ್ಥೆ ಕೋಟೇಶ್ವರದಲ್ಲಿ ಆರಂಭಗೊಂಡಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಉಲ್ಲಾಸ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ವರದಿ-ಜಗದೀಶ
ಸುದ್ದಿ ಮತ್ತು ಜಾಹೀರಾತು ಪ್ರಕಟಿಸಲು ಸಂಪರ್ಕಿಸಿ-9141825696
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…