ಪ್ರಮುಖ

ಚಂದನ್ ಮೋಟಾರ್ ಪ್ಯೂಯೆಲ್ಸ್ ಹೆಮ್ಮಾಡಿಯಲ್ಲಿ ಶುಭಾರಂಭ

Share

Advertisement
Advertisement

ಕುಂದಾಪುರ:ತಾಲೂಕಿನ ಹೆಮ್ಮಾಡಿ ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಆಯಿಲ್ ರಿಟೈಲ್ ಔಟ್‍ಲೆಟ್ ಚಂದನ್ ಮೋಟಾರ್ ಪ್ಯೂಯೆಲ್ಸ್ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಜಾಲಾಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಚಂದನ್ ಪ್ಯೂಯೆಲ್ಸ್ ನಿಂದ ಪರಿಸರದ ಅಕ್ಕಪಕ್ಕದ ಗ್ರಾಮದ ಜನರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನ ಸವಾರರಿಗೆ ಬಹಳಷ್ಟು ಅನುಕೂಲಕರವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಾಣಗೊಂಡಿರುವ ಚಂದನ್ ಪ್ಯೂಯೆಲ್ಸ್ ಆಕರ್ಷಕವಾಗಿದ್ದು ವಾಹನ ನಿಲುಗಡೆ ಮಾಡಲು ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿದೆ.ಭಾರತದಲ್ಲೆ ಅತ್ಯಂತ ಜನಪ್ರಿಯ ಮತ್ತು ಗುಣಮಟ್ಟದ ತೈಲವನ್ನು ನೀಡುತ್ತಿರುವ ಇಂಡಿಯನ್ ಆಯಿಲ್ ರಿಟೈಲ್ ಔಟ್ ಲೆಟ್ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆ ಆಗಿರುವುದರಿಂದ ಉತ್ತಮ ಗುಣ ಮಟ್ಟದ ಡಿಸೇಲ್,ಪೆಟ್ರೋಲ್ ವಾಹನ ಮಾಲೀಕರಿಗೆ ದೊರಕಲಿದೆ.
ಚಂದನ್ ಪ್ಯೂಯೆಲ್ಸ್ ಮಾಲೀಕರಾದ ನಾರಾಯಣ ಎಂ ಚಂದನ್ ಅವರು ಸ್ವಾಗತಿಸಿ ಮಾತನಾಡಿ,ಹೆಮ್ಮಾಡಿ ಜಾಲಾಡಿ ಪರಿಸರದಲ್ಲಿ ನೂತನವಾಗಿ ಚಂದನ್ ಪ್ಯೂಯೆಲ್ಸ್ ಎಂಬ ಹೆಸರಿನೊಂದಿಗೆ ನೂತನವಾಗಿ ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲಾಗಿದೆ.ನಮ್ಮ ಉದ್ಯಮಕ್ಕೆ ಗ್ರಾಮಸ್ಥರು ಮತ್ತು ಪರಿಸರದ ಜನರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನ ಧರ್ಮದರ್ಶಿ ವೇದ ಮೂರ್ತಿ ಹೆಚ್.ಬಾಲಚಂದ್ರ ಭಟ್ ಅವರು ಚಂದನ್ ಮೋಟರ್ ಪ್ಯೂಯೆಲ್ಸ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ,ಯಾವುದೇ ಒಂದು ಒಳ್ಳೆ ಕೆಲಸವನ್ನು ಆರಂಭಿಸಲು ಶುಭಹಾರೈಕೆ ಮುಖ್ಯವಾಗಿರುತ್ತದೆ.ಯಾವಾಗಲೂ ಒಳ್ಳೆ ಮಾತುಗಳನ್ನು ಹೇಳಿದರೆ ಒಳ್ಳೆಯದು ಆಗುತ್ತದೆ ಎನ್ನುವ ಮಾತಿದೆ.ಹಿರಿಯರ ಆಶೀರ್ವಾದ ನಮ್ಮ ಜತೆ ಇದ್ದರೆ ನಾವು ಮಾಡವ ಕೆಲಸ ಕಾರ್ಯಗಳು ಯಶಸ್ಸಿನಿಂದ ಸಾಗಲಿದೆ ಎಂದು ಹೇಳಿದರು.ಒಂದು ವ್ಯವಸ್ಥೆಯನ್ನು ಆರಂಭಿಸುವ ಮುನ್ನ ಸುತ್ತಲಿನ ಪರಿಸರವನ್ನು ನೋಡಿಕೊಂಡು ಮಾಡುವುದು ಬಹಳ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ನಾರಾಯಣ ಎಂ ಚಂದನ್ ಅವರ ಆಲೋಚನೆ ಪೂರಕವಾಗಿದೆ.ವ್ಯವಹಾರದಲ್ಲಿ ಯಶಸ್ಸು ಗಳಿಸಲು ಪರಿಶ್ರಮ ಮುಖ್ಯವಾಗಿದೆ ನವ ಉದ್ಯಮಕ್ಕೆ ಶುಭವಾಗಲಿ ಎಂದು ಶುಭವನ್ನು ಹಾರೈಸಿದರು.
ಮನಿಷಾ ಕೆಟರರ್ಸ್ ಮುಂಬೈ ವಾಮನ ಎಸ್.ಶೆಟ್ಟಿ ಅವರು ಚಂದನ್ ಪ್ಯೂಯೆಲ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿ,ಒಡನಾಡಿಯಾಗಿರುವ ಸಹದ್ಯೋಗಿ ನಾರಾಯಣ ಚೆಂದನ ಅವರು ನಿರ್ಮಿಸಿರುವ ಪೆಟ್ರೋಲ್ ಬಂಕ್ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿನ್ಮಯಿ ಆಸ್ಪತ್ರೆ ಡಾ.ಉಮೇಶ್ ಪುತ್ರನ್ ಅವರು ಮಾತನಾಡಿ,ಯಾವುದೆ ಒಂದು ಉದ್ಯಮದ ಬೆಳವಣಿಗೆ ಎನ್ನುವುದು ಉದ್ಯಮಿಗಳಿಗೆ ಮಾತ್ರ ತಿಳಿದಿರುತ್ತದೆ.ಒಂದು ಉದ್ಯಮ ಯಶಸ್ವಿಯಾಗಿ ಮುಂದುವರೆಯಲು ಪರಿಶ್ರಮ ಅತಿಮುಖ್ಯವಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಓದಿ ಮುಂಬೈ ನಗರಕ್ಕೆ ತೆರಳಿ ಕೆಲಸವನ್ನು ಮಾಡಿಕೊಂಡು ಉದ್ಯಮವನ್ನು ಆರಂಭಿಸಿ ಯಶಸ್ಸನ್ನು ಕಂಡಿರುವ ನಾರಾಯಣ ಚಂದನ್ ಅವರಿಗೆ ಉದ್ಯಮ ಕ್ಷೇತ್ರ ಹೊತಲ್ಲ.ಹೊಸ ಉದ್ಯಮದಲ್ಲಿ ಅವರು ಯಶಸ್ಸನ್ನು ಕಾಣಲಿದ್ದಾರೆ ಎಂದು ಶುಭಹಾರೈಸಿದರು.
ರಮೇಶ ಮೊಗವೀರ ಮಾತನಾಡಿ,ಶುಭ ಸಂದರ್ಭದಲ್ಲಿ ಚಂದನ್ ಪ್ಯೂಯೆಲ್ ಎನ್ನುವ ನೂತನ ಘಟಕವನ್ನು ಆರಂಭಿಸಾಗಿದೆ.ಮುಂದಿನ ದಿನಗಳಲ್ಲಿ ಅನೇಕ ಶಾಖೆಗಳನ್ನು ಹೊಂದುವಂತೆ ಆಗಲಿ ಎಂದು ಆಶೀರ್ವಜಿಸಿದರು.
ಇಂಡಿಯನ್ ಆಯಿಲ್ ವರುಣ್ ಮಾತನಾಡಿ,ಭಾರತದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಇಂಡಿಯನ್ ಆಯಿಲ್ ಔಟ್‍ಲೆಟ್ ಗ್ರಾಮೀಣ ಪ್ರದೇಶದಲ್ಲಿಯೂ ಆರಂಭಗೊಂಡಿರುವುದರಿಂದ ಜನರಿಗೆ ಉತ್ತಮವಾದ ಸೇವೆ ಸಿಗಲಿದೆ ಎಂದರು.ಎಲ್ಲರೂ ಬಂಕ್‍ಗೆ ಭೇಟಿ ನೀಡಬೇಕೆಂದು ವಿನಂತಿಸಿಕೊಂಡರು.
ಮಹಲಸಾ ಎಂಟರ್‍ಪ್ರೈಸಸ್ ಕುಂದಾಪುರ ಕೆ.ಪ್ರಭಾಕರ ಪ್ರಭು ಅವರು ಡಿಸೇಲ್ ಪ್ಯೂವೆಲ್ ಸ್ಟೇಷನ್ ಉದ್ಘಾಟಿಸಿ ಶುಭಹಾರೈಸಿದರು.ಇಂದಿರಾ ನಾರಾಯಣ ಚಂದನ್,ಉದಯ ಕುಮಾರ್ ಹಟ್ಟಿಯಂಗಡಿ,ಗುಜ್ಜಾಡಿ ಮಂಜು ನಾಯ್ಕ,ಎಚ್.ರಾಮ ನಾಯ್ಕ್,ಧನುಷ್,ಕೃಷ್ಣ ಗುಲ್ವಾಡಿ,ಭಾಸ್ಕರ ಗುಜ್ಜಾಡಿ,ಸುಮತಿ ಮೊಗವೀರ,ಭಾಸ್ಕರ ಗಂಗೊಳ್ಳಿ,ಸುಮನ ಗಣೇಶ ನಾಯ್ಕ್,ನಾರಾಣ ಚಂದನ್ ಅವರ ಹಿತೈಷಿಗಳು,ಕುಟುಂಬಸ್ಥರು,ಸ್ನೇಹಿತ ವರ್ಗದವರು ಉಪಸ್ಥಿತರಿದ್ದರು.ಪ್ರತಿಮಾ ರಾಘವೇಂದ್ರ ಪ್ರಾರ್ಥಿಸಿದರು.ಪತ್ರಕರ್ತ ಯು.ಎಸ್ ಶೆಣೈ ನಿರೂಪಿಸಿದರು.ರಮೇಶ್ ಮೊಗವೀರ ವಂದಿಸಿದರು.
ವರದಿ-ಜಗದೀಶ
ಸುದ್ದಿ ಮತ್ತು ಜಾಹೀರಾತುಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

Advertisement
Advertisement
Advertisement

Share
Team Kundapur Times

Recent Posts

ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ…

17 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್‍ಮಠ ನಾಡ:ಗಣೇಶೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ…

17 hours ago

ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ:ಹಲವು ದ್ವಿಚಕ್ರ ವಾಹನಗಳು ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ತೈಲ ವಾಹನದಿಂದ ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಸ್ತೆ…

18 hours ago

ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್…

21 hours ago

ತಿಮಿಂಗಿಲ ಮೀನಿನ ಕಳೆಬರ ಪತ್ತೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಮಡಿ ಲೈಟ್‍ಹೌಸ್ ಕಡಲ ತೀರದಲ್ಲಿ ಮೃತ ತಿಮಿಂಗಿಲ ಮೀನಿನ ಕಳೆಬರ ಮಂಗಳವಾರ ಪತ್ತೆಯಾಗಿದೆ.ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ…

3 days ago

ವಲಯ ಅರಣ್ಯಾಧಿಕಾರಿ ಸವಿತಾ ಆರ್ ದೇವಾಡಿಗಗೆ ಮುಖ್ಯಮಂತ್ರಿ ಪದಕ

ಕುಂದಾಪುರ:ಹೊನ್ನಾವರದಲ್ಲಿ ವಲಯ ಅರಣ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಆರ್ ದೇವಾಡಿಗ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ…

4 days ago