ಕುಂದಾಪುರ:ತಾಲೂಕಿನ ಸಂಗಮ್ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಪೇಕ್ಸ್ ಇಂಟರ್ನ್ಯಾಷನಲ್ ಟ್ರೇಡಿಂಗ್,ನವಭಾರತ್ ಟಿಂಬರ್ಸ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ಕಳೆದ ಎಂಟು ವರ್ಷಗಳಿಂದ ಆಫ್ರಿಕಾ ದೇಶದಲ್ಲಿ ಅಪೇಕ್ಸ್ ಇಂಟರ್ನ್ಯಾಷನಲ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಮರದ ಉದ್ಯಮವನ್ನು ಮಾಡುತ್ತಿರುವ ಅಪೇಕ್ಸ್ ಸಂಸ್ಥೆ ಬಹಳಷ್ಟು ಅನುಭವವನ್ನು ಹೊಂದಿದೆ.ಅದರ ಸಹ ಸಂಸ್ಥೆಯಾದ ನವಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಆರಂಭಗೊಂಡಿದೆ. ಕಟ್ಟಡ,ದೇವಸ್ಥಾನ,ಫರ್ನಿಚರ್,ಇಂಟೀರಿಯರ್ಗೆ ಬೇಕಾಗುವ ಎಲ್ಲಾ ರೀತಿಯ ಗುಣಮಟ್ಟದ ರೆಡಿ ಸೈಜ್,ಕಟ್ ಸೈಜ್ ಮರಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ.ಇಲ್ಲಿ ಇಂಪಾರ್ಟೆಂಟ್ ಟಿಕ್ಸ್,ಸಾಗುವಾನಿ,ಕಲ್ಲಂಬೋಗಿ,ಅಕೇಶೀಯಾ,ಬೋಗಿ,ಹಲಸು,ಹುಣಾಲ್,
ಮಹಾಗನಿ,ಹೆಬ್ಬೆಲಸು ನಂತಹ ಉತ್ತಮ ದರ್ಜೆಯ ಮರಗಳು ದೊರೆಯಲ್ಲಿದೆ.
ಅಪೇಕ್ಸ್ ಇಂಟರ್ನ್ಯಾಷನಲ್ ಟ್ರೇಡಿಂಗ್ ನವಭಾರತ್ ಟಿಂಬರ್ಸ್ ಪಾಲುದಾರರಾದ ಪೂರ್ಣಚಂದ್ರ ದೇವಾಡಿಗ ಮಾತನಾಡಿ,ಕರಾವಳಿ ತೀರದ ವಾತಾವರಣಕ್ಕೆ ಒಗ್ಗಿ ಕೊಳ್ಳುವಂತಹ ಊರಿನ ಮರಗಳು ಸಹಿತ ಉತ್ತಮ ಗುಣ ಮಟ್ಟವನ್ನು ಹೊಂದಿರುವ ಇಂಪಾರ್ಟೆಂಟ್ ಟಿಕ್ಸ್ ರೀಯಾತಿ ದರದಲ್ಲಿ ದೊರೆಯುತ್ತದೆ.ಉತ್ತಮ ರೀತಿಯ ರೆಡಿ ಸೈಜ್ ಮರಗಳನ್ನು ಖರೀದಿಸಲು ನಮ್ಮ ಸಂಸ್ಥೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭೇಟಿ ನೀಡಿ ನವ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಆಸೀಫ್ ಅನ್ವರ್ ಮಾತನಾಡಿ,ಅಮೇರಿಕಾ,ಆಫ್ರಿಕಾ ದೇಶಗಳ ಇಂಪಾರ್ಟೆಂಟ್ ಸಾಗುವಾನಿ ಮರ ನಮ್ಮಲ್ಲಿ ದೊರೆಯುತ್ತದೆ.ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಳ್ಳಲಿದೆ,ಯಾವುದೇ ರೀತಿ ಸಮಸ್ಯೆ ಇಲ್ಲಾ ನೂರು ಪರ್ಸೆಂಟ್ ಗ್ಯಾರಂಟಿ ಇದೆ ಎಂದು ಹೇಳಿದರು.ಮರಗಳು ರೆಡಿ ಸೈಜ್ನಲ್ಲಿ ದೊರೆಯಲ್ಲಿದ್ದು.ಉತ್ತಮ ರೀತಿಯ ಆಕರ್ಷಣೆ ಮತ್ತು ಗುಣ ಮಟ್ಟವನ್ನು ಹೊಂದಿರಲಿದೆ ಎಂದು ಹೇಳಿದರು.
ಅಪೇಕ್ಸ್ ಇಂಟರ್ನ್ಯಾಷನಲ್ ಟ್ರೇಡಿಂಗ್ ನವಭಾರತ್ ಟಿಂಬರ್ಸ್ ಪಾಲುದಾರರಾದ ಚೇತನ್.ಕೆ ದೇವಾಡಿಗ ಮತ್ತು ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…