ಕುಂದಾಪುರ

ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನ ಹೊಳ್ಮಗೆ ವಾರ್ಷಿಕ ಗೆಂಡ ಸೇವೆ

Share

Advertisement
Advertisement

ಕುಂದಾಪುರ:ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಹಬ್ಬದ ಅಂಗವಾಗಿ ಶ್ರೀ ದೇವರಿಗೆ ಮಹಾ ಮಂಗಳಾರತಿ ಸೇವೆ,ಹಣ್ಣು ಕಾಯಿ ಸೇವೆ,ಗೆಂಡ ಸೇವೆ,ಯಕ್ಷಗಾನ ಸೇವೆ,ದೈವ ದರ್ಶನ ಸೇವೆ,ಪಾಣರಾಟ ಸೇವೆ,ತುಲಾಭಾರ ಸೇವೆ,ವಿಶೇಷ ಪೂಜೆ ಜರುಗಿತು.
ವಾರ್ಷಿಕ ಹಬ್ಬದ ಪ್ರಯುಕ್ತ ದೈವಸ್ಥಾನವನ್ನು ಪುಷ್ಪಾಲಂಕಾರ ಹಾಗೂ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು.
ಶ್ರೀಹೋರ್ ಬೊಬ್ಬರ್ಯ ದೈವಸ್ಥಾನ,ಶ್ರೀ ನೆತ್ರ ಹಾೈಗುಳಿ ಹಾಗೂ ಬಂಟರ ಗರಡಿ ದೈವಸ್ಥಾನದ ಮೂರು ದೈವಗಳು ಜೊತೆಯಾಗಿ ಕೊಡಿ ನೀರಿಗೆ ಹೋಗುವುದು ವಿಶೇಷವಾದ ಆಚರಣೆ ಆಗಿದೆ.ಚಂಡೆ,ವಾದ್ಯ ಘೋಷದೊಂದಿಗೆ ದೈವವನ್ನು ಮೆರವಣಿಗೆ ಮೂಲಕ ಕೊಡಿ ನೀರಿಗೆ ಕರೆದುಕೊಂಡು ಹೋಗಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಆಚರಣೆ ಆಗಿದೆ.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಳ್ಮಗೆ ಮಾತನಾಡಿ,ಹೋರ್ ಬೊಬ್ಬರ್ಯ ದೈವಸ್ಥಾನ ಎನ್ನುವಂತಹದ್ದು ಈ ಭಾಗದಲ್ಲಿ ದೊಡ್ಡ ರೀತಿಯ ಕುಟುಂಬ ವರ್ಗವದ ಭಕ್ತ ಸಮೂಹವನ್ನು ಹೊಂದಿದಂತಹ ದೈವಸ್ಥಾನವಾಗಿದೆ.ಬಹಳ ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೈವಸ್ಥಾನದ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನಡೆದಿದೆ ಎಂದರು.ದೈವಸ್ಥಾನದ ಹಬ್ಬವೂ ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರು ಹಾಗೂ ದೈವಸ್ಥಾನದ ಅರ್ಚಕರು ಮತ್ತು ಗ್ರಾಮಸ್ಥರ ಪಾತ್ರ ದೊಡ್ಡದಾಗಿದೆ ಎಂದರು.ಐದು ದಿನಗಳ ಕಾಲ ದೈವಸ್ಥಾನದ ಹಬ್ಬ ನಡೆಯುತ್ತದೆ.ನಾಲ್ಕು ದಿನಗಳ ಕಾಲ ವಿಶೇಷವಾದ ರೀತಿಯಲ್ಲಿ ಕೊಲ ಸೇವೆ ಜರುಗುತ್ತದೆ.ಭಕ್ತ ಸಮೂಹದ ಕೊಡುಗೆ ನಿರಂತರವಾಗಿ ಇರಲಿ ಎಂದು ಬೇಡಿಕೊಂಡರು.ಹೋರ್ ಬೊಬ್ಬಯ,ಬಂಟರಗಡಿ ಹಾಗೂ ನೆತ್ರ ಹಾೈಗುಳಿ ದೈವಸ್ಥಾನದ ಹಬ್ಬ ಒಂದೆ ದಿನ ನಡೆಯುವುದರಿಂದ ದೊಡ್ಡ ರೀತಿಯ ಭಕ್ತ ಸಮೂಹವನ್ನು ನೋಡಬಹುದಾಗಿದೆ ಎಂದರು.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ಪಾತ್ರಿಗಳಾದ ಗಣೇಶ ಪೂಜಾರಿ ಅವರು ಮಾತನಾಡಿ,ಮೂರು ಜಿಲ್ಲೆಗಳಲ್ಲಿ ದೊಡ್ಡ ರೀತಿ ಭಕ್ತ ಸಮೂಹವನ್ನು ಹೊಂದಿರುವ ದೈವಸ್ಥಾನ ನಮ್ಮದು ಆಗಿದೆ.ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಜಾತ್ರೆಗೆ ಮೂಲೆ ಮೂಲೆಗಳಿಂದ ಭಕ್ತ ಸಮೂಹ ಹರಿದು ಬರುತ್ತದೆ.ಶ್ರೀ ಬೊಬ್ಬರ್ಯ ದೇವರ ಕಾರಣಿಕ ಶಕ್ತಿ ಮತ್ತು ದೇವರ ಮೇಲಿರುವ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ಭಕ್ತ ಸಮೂಹದ ಸಂಖ್ಯೆ ಅಧಿಕವಾಗುತ್ತಿದೆ ಎಂದರು.ಪಾಣರಾಟ ಸೇವೆ,ಕೊಡಿ ನೀರಿಗೆ ಹೋಗುವುದು,ತುಲಾಭಾರ ಸೇವೆ ಇಲ್ಲಿನ ವಿಶೇಷ ಸೇವೆ ಆಗಿದೆ ಎಂದು ದೈವಸ್ಥಾನದಲ್ಲಿ ಆಚರಣೆ ಗೊಳ್ಳುವ ಪದ್ಧತಿ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹೋರ್ ಬೊಬ್ಬರ್ಯ ದೈವಸ್ಥಾನದ ಗೌರವಾಧ್ಯಕ್ಷರಾದ ರಮೇಶ್ ಪೂಜಾರಿ,ಉಪಾಧ್ಯಕ್ಷ ಮಹಾಬಲ ಮೆಂಡನ್,ಕೋಶಾಧಿಕಾರಿ ಅರುಣ ಹೊಳ್ಮಗೆ,ಕಾರ್ಯದರ್ಶಿ ಬಾಬು ಪೂಜಾರಿ ಹಕ್ಲಾಡಿ,ಆಡಳಿತ ಮಂಡಳಿ ಸರ್ವಸದಸ್ಯರು,ಅರ್ಚಕವೃಂದವರು,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.

Advertisement
Advertisement
Advertisement

Share
Team Kundapur Times

Recent Posts

ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ…

17 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್‍ಮಠ ನಾಡ:ಗಣೇಶೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ…

17 hours ago

ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ:ಹಲವು ದ್ವಿಚಕ್ರ ವಾಹನಗಳು ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ತೈಲ ವಾಹನದಿಂದ ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಸ್ತೆ…

18 hours ago

ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್…

21 hours ago

ತಿಮಿಂಗಿಲ ಮೀನಿನ ಕಳೆಬರ ಪತ್ತೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಮಡಿ ಲೈಟ್‍ಹೌಸ್ ಕಡಲ ತೀರದಲ್ಲಿ ಮೃತ ತಿಮಿಂಗಿಲ ಮೀನಿನ ಕಳೆಬರ ಮಂಗಳವಾರ ಪತ್ತೆಯಾಗಿದೆ.ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ…

3 days ago

ವಲಯ ಅರಣ್ಯಾಧಿಕಾರಿ ಸವಿತಾ ಆರ್ ದೇವಾಡಿಗಗೆ ಮುಖ್ಯಮಂತ್ರಿ ಪದಕ

ಕುಂದಾಪುರ:ಹೊನ್ನಾವರದಲ್ಲಿ ವಲಯ ಅರಣ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಆರ್ ದೇವಾಡಿಗ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ…

4 days ago