ಕುಂದಾಪುರ

ಸೇನಾಪುರದಲ್ಲಿಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Share

Advertisement
Advertisement

ಕುಂದಾಪುರ:ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹಾಗೂ ಯುವಜನರು ಉದ್ಯೋಗಕ್ಕಾಗಿ ಬೆಂಗಳೂರು,ಮುಂಬಯಿ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಗೆ ದಿನಂಪ್ರತಿ ತೆರಳುತ್ತಿದ್ದಾರೆ.ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಮಾಡಲು ಕೂಡಲೆ ಕ್ರಮಗಳನ್ನು ಕೈಗೊಳ್ಳಬೇಕು ಇದು 24 ಗ್ರಾಮದ ಜನರ ಆಗ್ರಹವಾಗಿದೆ.ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ಮೂಲಕ ಉಗ್ರ ಹೋರಾಟ ಮಾಡಲಾಗುವುದೆಂದು ಸೇನಾಪುರ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ಸಂಚಾಲಕ ರಾಜೀವ ಪಡುಕೋಣೆ ಹೇಳಿದರು.

Advertisement

ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾನುವಾರ ಕುಂದಾಪುರ ತಾಲೂಕಿನ ಸೇನಾಪುರ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ಹಂತದ ಸೇನಾಪುರ ಚಲೋ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಆಗಬೇಕೆಂದು ಒತ್ತಾಯಿಸಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ರೈಲು ನಿಲ್ದಾಣದ ಎದುರು ಹಕ್ಕೋತ್ತಾಯ ಸಭೆಯನ್ನು ನಡೆಸಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಮೂಲಕ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಗಿದೆ.ಹೋರಾಟ ಮಾಡಿ ಐದು ತಿಂಗಳುಗಳು ಕಳೆದರು ಇಲಾಖೆ ಜನರ ಬೇಡಿಕೆಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ.ಜನರ ಭಾವನೆಗಳನ್ನು ಹತ್ತಿಕ್ಕುವಂತಹ ಕೆಲಸವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಮಾಡುತ್ತಿದ್ದಾರೆ ಎಂದು ದೂರಿದರು.

ಹೋರಾಟ ಸಮಿತಿ ಸದಸ್ಯ ಕೆನಡಿ ಪಿರೇರಾ ಮಾತನಾಡಿ,ಕರಾವಳಿ ಭಾಗದ ಧಾರ್ಮಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡಬೇಕಾದರೆ ಸೇನಾಪುರದಲ್ಲಿ ಎಲ್ಲಾ ಮಾದರಿಯ ರೈಲುಗಳು ನಿಲುಗಡೆ ಆಗಬೇಕು ಎಂದು ಹೇಳಿದರು.

ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡರಾದ ಸುರೇಶ ಕಲ್ಲೆಗಾರ ಅವರು ಮಾತನಾಡಿ,ಸೇನಾಪುರ ರೈಲು ನಿಲ್ದಾಣದಲ್ಲಿ ಎಲ್ಲಾ ಮಾದರಿಯ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮಾಡಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಜನರ ಧ್ವನಿಗೆ ಜನ ಪ್ರತಿನಿಧಿಗಳು ಸರಕಾರಗಳು ಸ್ಪಂದನೆ ಮಾಡುತ್ತಿಲ್ಲ.ರೈಲು ಸೇವೆ 24 ಗ್ರಾಮದ ಜನರಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಹೋರಾಟವನ್ನು ಮಾಡುತ್ತಿದ್ದೇವೆ ಇದು ನಮ್ಮ ಹಕ್ಕೊತ್ತಾಯವಾಗಿದೆ.ಸೇನಾಪುರದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ.ಮೂರನೇ ಹಂತದ ಹೋರಾಟದ ಅಂಗವಾಗಿ ರೈಲು ತಡೆಹಿಡಿದು ಪಟ್ಟಿ ಮೇಲೆ ಮಲಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ,ಎಕ್ಸ್ ಪ್ರೆಸ್ ,ಗೂಡ್ಸ್ ರೈಲು ನಿಲುಗಡೆ ಮಾಡುವುದರಿಂದ ಗಂಗೊಳ್ಳಿ ಬಂದರಿನಿಂದ ನೆರವಾಗಿ ಸಾಗರ ಉತ್ಪನ್ನಗಳನ್ನು ರಪ್ತು ಮಾಡಬಹುದಾಗಿದೆ.ವಾಣಿಜ್ಯ ಉದೇಶದಿಂದ ರೈಲು ನಿಲುಗಡೆ ಮಾಡುವುದರಿಂದಲೂ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ.ಆರ್ಥಿಕ ಉದ್ದೇಶವನ್ನು ಇಟ್ಟು ಕೊಂಡು ಸೇನಾಪುರದಲ್ಲಿ ರೈಲು ನಿಲುಗಡೆ ಮಾಡಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಹಂಚು ಕಾರ್ಮಿಕ ಸಂಘಟನೆ ಮುಖಂಡ ಎಚ್.ನರಸಿಂಹ ಮಾತನಾಡಿ,ಹಬ್ಬ ಹರಿದಿನದ ಸದರ್ಭದಲ್ಲಿ ಬಸ್ಸಿನ ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡುವುದರ ಮೂಲಕ ಖಾಸಗಿ ಬಸುಗಳ ಮಾಲೀಕರು ಹಳ್ಳಿ ಜನರ ದುಡ್ಡನ್ನು ಲೂಟಿಮಾಡುತ್ತಿದ್ದಾರೆ.ಇದನ್ನು ತಪ್ಪಿಸಬೇಕಾದರೆ ಸೇನಾಪುರದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಿಂದ ಮಾತ್ರ ಸಾಧ್ಯವಿದೆ ಎಂದರು.

ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ,ಸುರೇಶ ಕಲ್ಲೆಗಾರ,ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ,ಗುಜ್ಜಾಡಿ ಗ್ರಾ.ಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ,ಜನಾವಾದಿ ಮಹಿಳಾ ಸಂಘಟನೆ ಮುಖಂಡರು,ಕಟ್ಟಡ ಕಾರ್ಮಿಕರು,24 ಗ್ರಾಮದ ಗ್ರಾಮಸ್ಥರು, ಉಪಸ್ಥಿತರಿದ್ದರು.ನಾಗರಾಜ ಕುರು ಸ್ವಾಗತಿಸಿದರು.ಶ್ರೀಧರ ನಾಡ ನಿರೂಪಿಸಿದರು,ರಾಜೀವ ಪಡುಕೋಣೆ ವಂದಿಸಿದರು.ರಿಜಿನಲ್ ರೈಲ್ವೆ ಇಲಾಖೆ ಅಧಿಕಾರಿ ವಿನಯ ಕುಮಾರ್ ಅವರಿಗೆ ಹೋರಾಟ ಸಮಿತಿ ಸದಸ್ಯರು ಮನವಿಯನ್ನು ಸಲ್ಲಿಸಿದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವರದಿ:-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement
Advertisement

Share
Team Kundapur Times

Recent Posts

ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ…

8 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್‍ಮಠ ನಾಡ:ಗಣೇಶೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ…

8 hours ago

ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ:ಹಲವು ದ್ವಿಚಕ್ರ ವಾಹನಗಳು ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ತೈಲ ವಾಹನದಿಂದ ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಸ್ತೆ…

9 hours ago

ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್…

13 hours ago

ತಿಮಿಂಗಿಲ ಮೀನಿನ ಕಳೆಬರ ಪತ್ತೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಮಡಿ ಲೈಟ್‍ಹೌಸ್ ಕಡಲ ತೀರದಲ್ಲಿ ಮೃತ ತಿಮಿಂಗಿಲ ಮೀನಿನ ಕಳೆಬರ ಮಂಗಳವಾರ ಪತ್ತೆಯಾಗಿದೆ.ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ…

3 days ago

ವಲಯ ಅರಣ್ಯಾಧಿಕಾರಿ ಸವಿತಾ ಆರ್ ದೇವಾಡಿಗಗೆ ಮುಖ್ಯಮಂತ್ರಿ ಪದಕ

ಕುಂದಾಪುರ:ಹೊನ್ನಾವರದಲ್ಲಿ ವಲಯ ಅರಣ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಆರ್ ದೇವಾಡಿಗ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ…

3 days ago