ಬೈಂದೂರು:ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ನೂತನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಸೋಮವಾರ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.
ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್ ಎನ್ನುವುದು ಜಿಪ್ಸಮ್ ಆಗಿದ್ದು,ಮನೆ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಬಳಸ ಬಹುದಾಗಿದೆ.ಕ್ವಾಲಿಟಿ ಉತ್ತಮವಾಗಿದ್ದು ಗ್ರಾಹಕರಿಗೆ ಒಳ್ಳೆಯ ರೀತಿ ಅನುಭವನ್ನು ಕೊಡುತ್ತದೆ ಎಂದು ಹೇಳಿದರು.ಮರಳು ಮತ್ತು ನೀರಿನ ಬಳಕೆಯನ್ನು ತಗ್ಗಿಸ ಬಹುದಾದ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಒಗ್ಗಿಕೊಳ್ಳುವಂತಹ ವಿನೂತನ ಮಾದರಿಯ ಸಾರ್ವಿನ್ ಪ್ಲಾಸ್ಟ್ ಕಟ್ಟಡ ನಿರ್ಮಾಣದ ಕೆಲಸಕ್ಕೆ ಯೋಗ್ಯವಾದ ಮೂಲ ವಸ್ತುವಾಗಿದೆ ಎಂದರು.
ಆರ್ಯ ಬಿಲ್ಡ್ ಕೇರ್ ಮಾಲೀಕರಾದ ಜೋಶಿ ತೋಮಸ ಮಾತನಾಡಿ,ಸಾರ್ವಿನ್ ಪ್ಲಾಸ್ಟ್ ಮರಳಿನ ಸಮಸ್ಯೆ ಹಾಗೂ ಕಾರ್ಮಿಕರ ಸಮಸ್ಯೆಗೆ ಪರಿಹಾರದ ಮಾರ್ಗವಾಗಿದ್ದು,ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ ಎಂದರು.
ಆರ್ಯ ಎಂರ್ಟಪ್ರ್ರೈಸಸ್ ನಾವುಂದ ಮಾಲೀಕರಾದ ನಾಗೇಂದ್ರ ದೇವಾಡಿಗ ಅವರು ಮಾತನಾಡಿ,ನಮ್ಮ ನೂತನ ಸಂಸ್ಥೆಯನ್ನು ಹಿರಿಯ ಆಶೀರ್ವಾದದಿಂದ ಹೆಮ್ಮಾಡಿಯಲ್ಲಿ ಆರಂಭಿಸಲಾಗಿದೆ.ನಮ್ಮ ಸಂಸ್ಥೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.ಇದೊಂದು ವಿನೂತನ ಮಾದರಿಯ ಜಿಪ್ಸಮ್ ಆಗಿದ್ದು ಮರಳಿನ ಬಳಕೆ ಇಲ್ಲದೆ ಕಟ್ಟಡ,ಮನೆ ನಿರ್ಮಾಣದ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದರು.ಕರಾವಳಿ ತೀರ ಪ್ರದೇಶ ಸೇರಿದಂತೆ ಮಲೆನಾಡು ಭಾಗದ ವಾತಾವರಣಕ್ಕೂ ಸಾರ್ವಿನ್ ಪ್ಲಾಸ್ಟ್ ಒಗ್ಗಿಕೊಳ್ಳುತ್ತದೆ ಗ್ಯಾರಂಟಿ ನೀಡುವುದರ ಜತೆಗೆ ಮನೆ ಬಾಗಿಲಿಗೆ ಪ್ರಾಡೆಕ್ಟ್ ಸಫ್ಲೇ ಕೂಡ ಮಾಡಲಾಗುತ್ತದೆ ಎಂದರು.
ಎಮಿಯೆಂಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಸಕ ನಿತಿನ್ ಅವರು ಮಾತನಾಡಿ,ಮರಳು,ವಾಟರ್ ಕ್ವಿರಿಂಗ್ ಇಲ್ಲದೆ ಸಾರ್ವಿನ್ ಪ್ಲಾಸ್ಟ್ಅನ್ನು ಕಟ್ಟಡ ನಿರ್ಮಾಣದ ಕೆಲಸದಲ್ಲಿ ಬಳಸಿಕೊಳ್ಳಬಹುದಾಗಿದೆ.ಸಾರ್ವಿನ್ ಪ್ಲಾಸ್ಟ್ ಬಳಕೆಯಿಂದ ಹಣ ಮತ್ತು ಸಮಯದ ಉಳಿತಾಯ ಕೂಡ ಆಗಲಿದೆ ಎಂದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಎಸ್ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಅವರು ಸಂಸ್ಥೆಗೆ ಭೇಟಿ ನೀಡಿ ನವ ಉದ್ಯಮಕ್ಕೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರು,ಸಿಬ್ಬಂದಿಗಳು,ಅತಿಥಿಗಳು ಉಪಸ್ಥಿತರಿದ್ದರು.ಪ್ರಕಾಶ ದೇವಾಡಿಗ ಸ್ವಾಗತಿಸಿದರು.ಸಂಸ್ಥೆಯ ಸಹ ಮಾಲೀಕರಾದ ಲಂಬೋದರ ಶೆಟ್ಟಿ ವಂದಿಸಿದರು.
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀಶಂಕರಾಚಾರ್ಯ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ "ಐಕ್ಯಂ" 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ…
ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು…
ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ…
ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ…