ಕುಂದಾಪುರ

ಮಂಡಾಡಿ ಹೋರ್ವರಮನೆಯ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಂಪನ್ನ

Share

Advertisement
Advertisement
Advertisement

ಕುಂದಾಪುರ:ಮಂಡಾಡಿ ಹೋರ್ವರಮನೆ ಕುಟುಂಬದವರ ನಡೆಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಮಂಡಾಡಿ ಕಂಬಳ ಮಹೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಶುಕ್ರವಾರ ನಡೆಯಿತು.
ಕಂಬಳದ ದಿನ ಬೆಳಿಗ್ಗೆ ಕಂಬಳ ಗದ್ದೆಯ ಅಲಂಕಾರವನ್ನು ಮಾಡಲಾಗುತ್ತದೆ,ಧೂಮಾವತಿ ದೈವ,ದೇವರ ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತಳಿ ತೋರಣಗಳಿಂದ ಅಲಂಕಾರಿಸಲಾಗುತ್ತದೆ.
ಮಂಡಾಡಿ ಹೋರ್ವರಮನೆ ಕುಟುಂಬದವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಗುತ್ತದೆ.ಚಂಡೆ ವಾದ್ಯಗೋಷ್ಠಿಯೊಂದಿಗೆ ಮನೆ ಸದಸ್ಯರು ಸಮವಸ್ತ್ರ ಧರಿಸಿ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗದ ಮಿತಿಯನ್ನು ಅಳವಡಿಕೆ ಮಾಡಲಾಗಿದೆ.

Advertisement

ಜೋಡು ಕೆರೆ ಕಂಬಳ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು ಅವರು ದೀಪ ಬೆಳಗುವುದರ ಮೂಲಕ ಕಂಬಳವನ್ನು ಉದ್ಘಾಟಿಸಿ ಮಾತನಾಡಿ,ಕುಂದಾಪುರ ತಾಲೂಕಿನಲ್ಲಿ ಮೊದಲಿನಿಂದಲೂ ನಡೆದುಕೊಂಡ ಬಂದಂತಹ ಕಂಬಳ ಸಾಂಪ್ರದಾಯಿಕ ಕಂಬಳವಾಗಿದೆ. ಮಂಡಾಡಿ ಕಂಬಳ ಇಂದು ಸಾಂಪ್ರದಾಯಿಕ ಶೈಲಿಯಲ್ಲಿ ವಿಜೃಂಭಣೆಯಿಂದ ನಡೆದಿರುವುದು ಕಂಬಳದ ವೈಭವನ್ನು ಜಗತ್ತಿಗೆ ಸಾರಲಾಗಿದೆ.ಕುಂದಾಪುರ ಭಾಗದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಕ್ಕೆ ರಾಜ್ಯ ಸರ್ಕಾರ ಅನುದಾನವನ್ನು ನೀಡುವಲ್ಲಿ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಕೇಳಿಕೊಂಡರು.ಕುಂದಾಪುರ ಭಾಗದಲ್ಲಿಯೂ ಜೋಡು ಕೆರೆ ಕಂಬಳ ನಡೆಯುವಂತೆ ಪ್ರಯತ್ನಗಳು ನಡೆಯಲಿ ಎಂದು ಶುಭಹಾರೈಸಿದರು.

ಉದ್ಯಮಿ ಆದರ್ಶ ಶೆಟ್ಟಿ ಹೋರ್ವರಮನೆ ಮಂಡಾಡಿ ಮಾತನಾಡಿ,ಮಂಡಾಡಿ ಹೋರರ್ವರಮನೆ ಕಂಬಳವನ್ನು ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ.ಕಂಬಳ ಎನ್ನುವುದು ರೈತ ಸಮುದಾಯದವರಿಗೆ ಹಬ್ಬವಿದ್ದಂತೆ ಶತ ಶತಮಾನಗಳ ಇತಿಹಾಸ ಹೊಂದಿರುವ ಕಂಬಳದ ಜನಪ್ರಿಯತೆ ಆಧುನಿಕ ಯುಗದಲ್ಲಿಯೂ ಜನ ಪ್ರೀತಿಗಳಿಸಿರುವುದು ಕಂಬಳಕ್ಕೆ ಸಿಕ್ಕ ವಿಶೇಷವಾದ ಮನ್ನಣೆ ಆಗಿದೆ ಎಂದು ಹೇಳಿದರು.ಮುಂದಿನಗಳಲ್ಲಿ ಕಂಬಳವೂ ಇನ್ನಷ್ಟು ವಿಜೃಂಭಣೆಯಿಂದ ಸಾಗಲು ಮನೆ ದೇವರಾದ ಕಾಡ್ತಿಯಮ್ಮ ಆರ್ಶೀವಾದ ನೀಡಲಿ ಎಂದು ದೇವರಲ್ಲಿ ಬೇಡಿಕೊಂಡರು.

ರತ್ನಾಕರ್ ಶೆಟ್ಟಿ ಮಾತನಾಡಿ,ಸಾಂಪ್ರದಾಯಿಕವಾಗಿ ನಡೆಯುವ ಮಂಡಾಡಿ ಹೋರ್ವರಮನೆ ಕಂಬಳಕ್ಕೆ 800 ವರ್ಷಗಳ ಇತಿಹಾಸವನ್ನು ಹೊಂದಿದೆ.ವರ್ಷದಿಂದ ವರ್ಷಕ್ಕೆ ಭಾಗವಹಿಸುವ ಕೋಣಗಳ ಸಂಖ್ಯೆ ಹೆಚ್ಚಾಗುತ್ತಿದೆ,ಕಂಬಳ ಪ್ರೇಮಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ,ಕಂಬಳದ ಕೋಣಗಳ ಎಲ್ಲಾ ಯಜಮಾನರಿಗೆ ಗೌರವ ಧನ ನೀಡಲಾಗುತ್ತಿದ್ದು,ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಕಟುಂಬದಿಂದ ಇನ್ನಷ್ಟು ಶ್ರಮಿಸಲಿದೆ ಎಂದು ಎಂದು ಹೇಳಿದರು.ಮಂಡಾಡಿ ಕಂಬಳ ಊರ ಹಬ್ಬದಂತೆ ನಡೆಯುತ್ತಿದ್ದು,ಗ್ರಾಮಸ್ಥರ ಸಹಕಾರ ಮತ್ತು ದೈವ ದೇವರುಗಳ ಕೃಪೆಯಿಂದ ಸಾಧ್ಯವಾಗಿದೆ ಎಂದರು.

ಉದ್ಯಮಿ ಅಶೋಕ ಶೆಟ್ಟಿ ಮಾತನಾಡಿ,ಮಂಡಾಡಿ ಹೋರರ್ವರಮನೆ ಮನೆ ಕಂಬಳ ಈ ವರ್ಷ ಅದ್ದೂರಿಯಾಗಿ ನಡೆದಿದೆ.ಕಂಬಳದ ಕೋಣಗಳನ್ನು ಮತ್ತು ಅದರ ಯಜಮಾನರನ್ನು ಗೌರವದಿಂದ ನಡೆಸಿಕೊಳ್ಳುತ್ತಿರುವ ರೀತಿ ಎಲ್ಲರಿಗೂ ಮಾದರಿ ಆಗಿರುವಂತಹದ್ದು.ಜಗತ್ತಿನಾದ್ಯಂತ ಕಂಬಳದ ವೈಭವ ಪಸರಿಸಲಿ ಎಂದು ಶುಭ ಹಾರೈಸಿದರು.

ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿ,ಸಾಂಪ್ರದಾಯಿಕವಾಗಿ ನಡೆಯುವ ಮಂಡಾಡಿ ಕಂಬಳೋತ್ಸವಕ್ಕೆ ಕುಟುಂಬದವರ ಸಹಕಾರ ಅಮೂಲ್ಯವಾದದ್ದು ಎಂದು ಬಣ್ಣಿಸಿದರು.

ಸಂದರ್ಶ ಶೆಟ್ಟಿ ಮಾತನಾಡಿ,ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಬಹಳಷ್ಟು ಪ್ರಮುಖವಾದದ್ದು,ಇಂದಿನ ಯುವ ಪೀಳಿಗೆ ಕಂಬಳವನ್ನು ನೋಡುವುದು ಮಾತ್ರವಲ್ಲದೆ ಕೋಣಗಳ ಸಾಕಾಣಿಕೆಯಲ್ಲೂ ಹಿರಿಯರ ಜತೆ ಕೈಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ.ಬಿ ಶಾಂತರಾಮ ಶೆಟ್ಟಿ,ಸಾಂಪ್ರದಾಯಿಕ ಕಂಬಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ,ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ,ವೆಂಕಟ ಪೂಜಾರಿ,ಆನಂದ,ಬಾಲಣ್ಣ ಹೋರ್ವ,ರತ್ನಾಕರ ಶೆಟ್ಟಿ ಮಂಡಾಡಿ,ಎನ್ ಮಂಜಯ್ಯ ಶೆಟ್ಟಿ,ಸನಾತ್ ಶೆಟ್ಟಿ ಮಂಡಾಡಿ,ಬಾರ್ಕೂರು ಶಾಂತರಾಮ ಶೆಟ್ಟಿ,ಮಂಡಾಡಿ ಹೋರ್ವರಮನೆ ಕುಟುಂಬಿಕರು ಮತ್ತು ಹೊಂಬಾಡಿ ಮತ್ತು ಮಂಡಾಡಿ ಸಮಸ್ತ ಗ್ರಾಮಸ್ಥರು,ಕಂಬಳ ಪ್ರೇಮಿಗಳು ಉಪಸ್ಥಿತರಿದ್ದರು.
ಸ್ಪರ್ಧೆಗಳ ವಿವರ ಕೋಣಗಳ ಹಗ್ಗದ ಓಟ,ಕೋಣಗಳ ಹಗ್ಗದ ಓಟ ಹಿರಿಯ ವಿಭಾಗ,ಕೋಣಗಳ ಹಗ್ಗದ ಓಟ ಕಿರಿಯ ವಿಭಾಗ,ಕೋಣಗಳ ಹಗ್ಗದ ಓಟ ಅತಿ ಕಿರಿಯ ವಿಭಾಗ,ಹಾಗೆ ಯುವಕರಿಗೆ ಕೆಸರುಗದ್ದೆ ಓಟ ನಡೆಯಿತು ಬಂದಂತಹ ಎಲ್ಲಾ ಕೋಣೆಗಳಿಗೂ ಕೂಡ ಗೌರವಧನವನ್ನು ನೀಡಿ ಗೌರವಿಸಲಾಯಿತು.
ವಿಜೇತರಾದ ಕೋಣಗಳ ಮಾಲೀಕರಿಗೆ ಮತ್ತು ಕ್ರೀಡಾಳುಗಳಿಗೆ ನಗದು ಮತ್ತು ಶಾಶ್ವತ ಫಲಕದೊಂದಿಗೆ ಪುರಸ್ಕರಿಸಲಾಯಿತು.

ರತ್ನಾಕರ ಶೆಟ್ಟಿ, ಹರ್ಷಿತಾ ಶೆಟ್ಟಿ,ಜಯರಾಮ ಶೆಟ್ಟಿ, ಸುಧಾಕರ ಕೊಠಾರಿ ಅವರು ಮಂಡಾಡಿ ಕಂಬಳದ ಯಶಸ್ಸಿಗೆ ಬಹಳಷ್ಟು ಶ್ರಮವನ್ನು ವಹಿಸಿದ್ದರು.

Advertisement
Advertisement

Share
Team Kundapur Times

Recent Posts

ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…

1 week ago

ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ

ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…

1 week ago

ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…

2 weeks ago

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…

2 weeks ago

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…

2 weeks ago

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…

3 weeks ago