( ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿದರು)
ಬೈಂದೂರು:ನಾಗೂರು ಬಸ್ ಸ್ಟ್ಯಾಂಡ್ ಬಳಿ ಕೃಷ್ಣ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ
ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು.
ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿ ಶುಭಹಾರೈಸಿದರು.
ಜಯಪ್ರಕಾಶ್ ಶೆಟ್ಟಿ ಮಾತನಾಡಿ,ಗ್ರಾಮೀಣ ಪ್ರದೇಶದ ಯುವಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಅನ್ನು ಸ್ಥಾಪನೆ ಮಾಡಲಾಗಿದೆ.ಕ್ರೀಡೆಗೆ ಪೂರಕವಾಗಿರುವಂತಹ ಎಲ್ಲಾ ರೀತಿಯ ವಸ್ತುಗಳು ಇಲ್ಲಿ ದೊರೆಯುತ್ತದೆ ಇದರ ಪ್ರಯೋಜನವನ್ನು ಸಂಘ, ಸಂಸ್ಥೆಗಳು,ಕ್ರಿಕೆಟ್ ತಂಡದ ಸದಸ್ಯರು,ಕಾರ್ಯಕ್ರಮದ ಆಯೋಜಕರು ಪಡೆದು ಕೊಳ್ಳಬೇಕು ಎಂದು ಕೇಳಿಕೊಂಡರು.
ಕಂಬದಕೋಣೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಮಾತನಾಡಿ,ಹತ್ತು ವರ್ಷಗಳ ಹಿಂದೆ ಸನ್ ರೈಸ್ ಸ್ಪೋರ್ಟ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಆ ನೆಲೆಯಲ್ಲಿ ಉತ್ಸಾಹಿ ಯುವಕರು ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಎನ್ನುವ ನೂತನ ಸಂಸ್ಥೆಯನ್ನು ನಾಗೂರಿನಲ್ಲಿ ಸ್ಥಾಪನೆಮಾಡಿದ್ದಾರೆ.ಈ ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಗೆ ಸಂಬಂಧಿಸಿದ ಎಲ್ಲಾ ಬಗೆಯ ಕ್ರೀಡಾ ಪರಿಕರಗಳು ದೊರೆಯುತ್ತದೆ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಸ್ಪೋರ್ಟ್ಸ್ ಗ್ಯಾಲರಿ ಆರಂಭಿಸಿದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಯೋಜನೆ ಆಗಲಿದೆ ಎಂದರು.
ಸನ್ ರೈಸ್ ಸ್ಪೋರ್ಟ್ ಗ್ಯಾಲರಿ ಸಂಸ್ಥೆಯ ಮಾಲೀಕರಾದ ಪ್ರತಾಪ್ ಶೆಟ್ಟಿ ಹಳಗೇರಿ ಮಾತನಾಡಿ,ಕ್ರಿಕೆಟ್ ಗೆ ಸಂಬಂಧಿಸಿದ ಸಾಮಾಗ್ರಿಗಳು,ಶಟಲ್ ಬ್ಯಾಟ್, ವಾಲಿಬಾಲ್, ಸ್ಪೋರ್ಟ್ಸ್ ಗೆ ಸಂಬಂಧಿಸಿದ ಜರ್ಸಿ, ಸನ್ಮಾನ ಮತ್ತು ಮೊಮೇಂಟ್ ಗಳು ದೊರೆಯುತ್ತದೆ ನಮ್ಮ ನವ ಉದ್ಯಮಕ್ಕೆ ಎಲ್ಲಾ ಸಹಕರಿಸಬೇಕು ಎಂದು ಕ್ರೀಡಾಭಿಮಾನಿಗಳಲ್ಲಿ ವಿನಂತಿಸಿ ಕೊಂಡರು.ಈ ಸಂದರ್ಭ ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಸಹ ಮಾಲೀಕರಾದ ಪ್ರತಾಪ್ ಸುಧಾಕರ ಶೆಟ್ಟಿ,ನೂರಿ ಅಶ್ರಫ್, ಸನ್ ರೈಸ್ ಸ್ಪೋರ್ಟ್ಸ್ ತಂಡದ ಸದಸ್ಯರು, ಕ್ರೀಡಾಭಿಮಾನಿಗಳು, ಸ್ಥಳೀಯರು,ಆಟೋ ಚಾಲಕ ಮತ್ತು ಮಾಲೀಕರ ಸಂಘದವರು ಉಪಸ್ಥಿತರಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…