ಕುಂದಾಪುರ

ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ,ಸಾರ್ವಜನಿಕರಿಂದ ಆಕ್ರೋಶ

Share

Advertisement
Advertisement

ಕುಂದಾಪುರ:ಹೇರಿಕುದ್ರು ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಹಮ್ಮಿಕೊಂಡಿರುವ ಮಕ್ಕಳ ಯಕ್ಷಗಾನ ಸಪ್ತಾಹದಲ್ಲಿ ಶನಿವಾರ ರಾತ್ರಿ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಪ್ರದರ್ಶನದ ನಡುವೆ ಯಕ್ಷಗಾನ ಸಂಘಟಕರು ಅನಿವಾರ್ಯವಾಗಿ ಪ್ರದರ್ಶನ ನಿಲ್ಲಿಸುವ ಪರಿಸ್ಥಿತಿ ಎದುರಾಗಿದ್ದ ಘಟನೆ ನಡೆದಿದೆ. ಸಾರ್ವಜನಿಕ ದೂರಿನ ಹಿನ್ನೆಲೆ ಯಲ್ಲಿ ಪೊಲೀಸರು ಯಕ್ಷಗಾನ
ಪ್ರದರ್ಶನ ನಿಲ್ಲಿಸುವಂತೆ ತಿಳಿಸಿದ್ದರಿಂದ ಅನಿವಾರ್ಯ ಕಾರಣದಿಂದ ಯಕ್ಷಗಾನ ಪ್ರದರ್ಶನ ನಿಲ್ಲಿಸಲಾಗಿದೆ.ಯಕ್ಷಗಾನ ವೇದಿಕೆಯಿಂದ ಚಿಣ್ಣರು ತೆರವು ಆಗಬೇಕೆಂದಾಗ ಪ್ರದರ್ಶನ ನೀಡುತ್ತಿದ್ದ ಮಕ್ಕಳು ಆಚ್ಚರಿ ಗೊಳಗಾದರು.ನಂತರ ಸಭಿಕರಿಗೆ ನಮಿಸಿ ವೇದಿಕೆ ತೆರವು ಗೊಳಿಸಿದರು.

Advertisement

ರಾತ್ರಿ 10.30ರ ತನಕ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡಿದ್ದೆವು. ಪ್ರದರ್ಶನದ ವೇಳೆ ಭಾಗವತರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿದ್ದರಿಂದ ಬದಲಿ ಭಾಗವತರ ನಿಯೋಜಿಸುವಲ್ಲಿ ಒಂದಷ್ಟು ಸಮಯ ವ್ಯಯವಾಗಿತ್ತು. ಪ್ರದರ್ಶನ 10.30 ದಾಟಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆಟ ನಿಲ್ಲಿಸುವಂತೆ ಸೂಚನೆ ನೀಡಿದರು. ವಿಚಾರಿಸಿದಾಗ ಇಲ್ಲಿನ ಮಹಾಂಕಾಳಿ ದೇವಸ್ಥಾನದ ಅರ್ಚಕ ರಿಂದ ದೂರು ಬಂದಿದೆ ಎಂದು ಹೇಳಿದ್ದಾರೆ. ಯಕ್ಷಗಾನ ಪ್ರದರ್ಶನಕ್ಕೆ ರಾತ್ರಿ 1ಗಂಟೆ ತನಕ ಅವಕಾಶವಿದೆ ಎಂದು ಹೈಕೋರ್ಟ್ ಈ ಹಿಂದೆ ತೀರ್ಪಿನಲ್ಲಿ ತಿಳಿಸಿದೆ. ಆದರೆ ಇಲ್ಲಿ ವ್ಯತಿರಿಕ್ತ ಪರಿಸ್ಥಿತಿ ತಲೆದೋರಿತ್ತು.ಕಳೆದೊಂದು ವಾರದಿಂದ ನಡೆಯುತ್ತಿದ್ದ ಸಪ್ತಾಹದ ಯಕ್ಷ ಪ್ರದರ್ಶನದಲ್ಲಿ ಯಾವುದೇ ತೊಂದರೆಯಾಗಿಲ್ಲ.ಆಟ ನಿಲ್ಲಿಸುವಂತೆ ಸೂಚಿಸಿದ ಮೇರೆಗೆ ಪ್ರದರ್ಶನ ನಿಲ್ಲಿಸಿ ದ್ದೇವೆ. ಎಂದು ಸಂಘಟಕ ಮಹಾಬಲ ಹೇರಿಕುದ್ರು ತಿಳಿಸಿದ್ದಾರೆ.

ಯಕ್ಷಗಾನವನ್ನು ನಾವೆಲ್ಲರೂ ದೈವೀ ಕಲೆಯೆಂದು ನಂಬಿದವರು.ಅದರಲ್ಲೂ ಮಕ್ಕಳು ಹಲವು ದಿನಗಳ ಸಿದ್ದತೆ ಬಳಿಕ ವೇದಿಕೆ ಏರಿದ್ದರು.ಪ್ರದರ್ಶನದ ಮಧ್ಯೆ ಆಟ ನಿಲ್ಲಿಸುವಂತೆ ಒತ್ತಡ ಹೇರಿದ್ದು ಯಕ್ಷಗಾನಕ್ಕೆ ಮಾಡಿದ ಅವಮಾನ.ಬಹಳ ನೋವಾಗಿದೆ.ಇಂತಹ ಘಟನೆ ಮುಂದೆ ನಡೆಯಬಾರದು ಎಂದು ಸ್ಥಳೀಯ ನಿವಾಸಿ ಭಾಸ್ಕರ ಬಿಲ್ಲವ ಹೇರಿಕುದ್ರು ಹೇಳಿದ್ದಾರೆ.ಚಿಣ್ಣರ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Advertisement
Advertisement

Share
Team Kundapur Times

Recent Posts

ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ…

8 hours ago

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಉಪ್ಕಲ್‍ಮಠ ನಾಡ:ಗಣೇಶೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಉಪ್ಕಲ್ ಮಠ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 35ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮ ನಾನಾ…

8 hours ago

ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ:ಹಲವು ದ್ವಿಚಕ್ರ ವಾಹನಗಳು ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ತೈಲ ವಾಹನದಿಂದ ತೆಕ್ಕಟ್ಟೆ ಯಿಂದ ತ್ರಾಸಿ ವರೆಗೆ ರಸ್ತೆ…

10 hours ago

ಶ್ರೀ ದುರ್ಗಾ ಹಾರ್ಡ್ ವೇರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್ ಆಫ್ ಬರೋಡ ಎದುರುಗಡೆ ಇರುವ ಶ್ರೀ ಬ್ರಾಹ್ಮಿ ದುರ್ಗಾ ಕಾಂಪ್ಲೆಕ್ಸ್…

13 hours ago

ತಿಮಿಂಗಿಲ ಮೀನಿನ ಕಳೆಬರ ಪತ್ತೆ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಮಡಿ ಲೈಟ್‍ಹೌಸ್ ಕಡಲ ತೀರದಲ್ಲಿ ಮೃತ ತಿಮಿಂಗಿಲ ಮೀನಿನ ಕಳೆಬರ ಮಂಗಳವಾರ ಪತ್ತೆಯಾಗಿದೆ.ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ…

3 days ago

ವಲಯ ಅರಣ್ಯಾಧಿಕಾರಿ ಸವಿತಾ ಆರ್ ದೇವಾಡಿಗಗೆ ಮುಖ್ಯಮಂತ್ರಿ ಪದಕ

ಕುಂದಾಪುರ:ಹೊನ್ನಾವರದಲ್ಲಿ ವಲಯ ಅರಣ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಆರ್ ದೇವಾಡಿಗ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ…

3 days ago