ಕುಂದಾಪುರ

ನಾವುಂದ-ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ

Share

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮದ ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಶ್ರೀಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಚಂಡಿಕಾ ಹೋಮ ಹಾಗೂ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ,ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ದುರ್ಗಾದೀಪ ನಮಸ್ಕಾರ ಪೂಜೆ,ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಭಾನುವಾರ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಭಾಸ್ಕರ ಪುತ್ರನ್ ಮಾತನಾಡಿ,ಬೊಬ್ಬರ್ಯ ದೇವಸ್ಥಾನ ಮತ್ತು ರಾಮ ಮಂದಿರ ನಿರ್ಮಾಣ ಮಾಡಬೇಕ್ಕೆನ್ನುವ ಸಂದರ್ಭದಲ್ಲಿ ಎದುರಾದ ವಿಘ್ನದಿಂದ ಪ್ರಶ್ನಾ ಚಿಂತೆಯನ್ನು ಮಾಡಿದಾಗ.ಪ್ರಶ್ನಾ ಚಿಂತನದಲ್ಲಿ ಗೋಚರಿಸಿದಂತೆ ಸುಮಾರು 800 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ದೇವಿ ಚೈತನ್ಯ ನಶೀಸಿ ಹೋಗಿರುವುದು ಕಾಣಿಸಿದೆ,ಕೆಂಪು ಕಲ್ಲಿನ ಪುಷ್ಕರಣಿ ಇಲ್ಲಿ ಇದ್ದಿದ್ದು ಅದು ಮುಚ್ಚಿಹೋಗಿರುವುದಾಗಿ ಕಂಡು ಬಂದಿದೆ.ಪ್ರಶ್ನೆ ಚಿಂತನಾ ಮೊದಲು ಇಲ್ಲಿ ದೇವಿ ಸಾನಿಧ್ಯ ಇರುವುದು ಯಾರಿಗೂ ತಿಳಿದಿರಲಿಲ್ಲ ಎಂದರು.ಪ್ರಶ್ನಾ ಚಿಂತನೆ ಯಂತೆ ಶೋಧನೆ ಮಾಡಿದಾಗ ದೇವಾಲಯ ಇರುವಂತಹ ಕುರುಹು ಬಹಳಷ್ಟು ಸಿಕ್ಕಿವೆ.ದೇವರ ಡಬ್ಬಿಯಲ್ಲಿ ರಾಣಿ ಎಲಿಜೆಬೆತ್ ಕಾಲದ ಚಿನ್ನದ ನಾಣ್ಯ ಸಿಕ್ಕದೆ ಪೂರಕವಾಗಿ ಎಂಬಂತೆ ಶಿಲಾಶಾಸನ ಕೂಡ ದೊರೆತ್ತಿದೆ ಎಂದರು.2019 ರಲ್ಲಿ ದೇವರ ಪ್ರತಿಷ್ಠಾ ಕಾರ್ಯವನ್ನು ಮಾಡಲಾಗಿದೆ.ಹಣ ಕೊರತೆಯಿಂದ ಪದ್ಮಾವತಿ ಅಮ್ಮನವರ ದೇವಾಂಲಯದ ಕೆಲಸ ಕಾರ್ಯಗಳು ಬಾಕಿ ಇದೆ.ರಾಮ ಮಂದಿರ ನಿರ್ಮಾಣ ಅರ್ಧಕ್ಕೆ ನಿಂತಿದೆ.ದೇವಸ್ಥಾನದ ಪೂರ್ಣ ಕೆಲಸವಾಗಲು ಹಣದ ಅವಶ್ಯಕತೆ ಬಹಳಷ್ಟು ಇರುವುದರಿಂದ ಊರ ಪರಊರಿನ ಭಕ್ತರು,ದಾನಿಗಳು,ಸಮಾಜ ಬಾಂಧವರು,ಸರಕಾರ,ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಕೇಳಿಕೊಂಡರು.
ದೇವಸ್ಥಾನದ ಪ್ರಧಾನ ಅರ್ಚಕಾರದ ವೇ.ಮೂ ಪರಮೇಶ್ವರ ಅಡಿಗ ಅವರು ಮಾತನಾಡಿ,ಬಹಳಷ್ಟು ಇತಿಹಾಸವನ್ನು ಹೊಂದಿರುವ ಬೊಬ್ಬರ್ಯ ಮತ್ತು ದೇವಿ ಸಾನಿಧ್ಯ ಇರುವ ಇವೊಂದು ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಬಹಳಷ್ಟು ಬಾಕಿ ಇವೆ,ಸದ್ಭಕ್ತರು ಕೈ ಜೋಡಿಸಬೇಕು ಎಂದರು.ಶರನ್ನವರಾತ್ರಿ ಉತ್ಸವ ಆಚರಣೆ ಮತ್ತು ಚಂಡಿಕಾ ಹೋಮದ ಪಾವಿತ್ರತೆ ಬಗ್ಗೆ ವಿವರಿಸಿದರು.
ಈ ಸಂದರ್ಭ ದೇವಸ್ಥಾನದ ಗೌರವಾಧ್ಯಕ್ಷರಾದ ಪಿ.ನಾರಾಯಣ ಖಾರ್ವಿ ಮತ್ತು ನಾಗೇಶ ಪುತ್ರನ್,ಕಾರ್ಯದರ್ಶಿ ರತ್ನಾಕರ ಖಾರ್ವಿ,ಕೋಶಾಧಿಕಾರಿ ಸತೀಶ ಶ್ರೀಯಾನ್,ಮಾಜಿ ಅಧ್ಯಕ್ಷರಾದ ಗೋವಿಂದ ಡಿ ಮಸ್ಕಿ,ಸಮಿತಿ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

ವಿಶೇಷ.ಸೂಚನೆ-ದೆವಸ್ಥಾದ ಜೀರ್ಣೋದ್ಧಾರ ಕೆಲಸಗಳು ಬಹಳಷ್ಟು ಬಾಕಿ ಉಳಿದಿದ್ದು,ಈ ಕಾಮಗಾರಿ ಕೆಲಸಕ್ಕೆ ಭಕ್ತರು ದೇಣಿಗೆಯನ್ನು ಈ ಖಾತೆ ಕಳುಹಿಸಬಹುದು.
ದೇವಸ್ಥಾನದ ಎಸ್.ಬಿ ಖಾತೆ ಸಂಖ್ಯೆ -01732200144774
ಐಎಫ್ ಎಸ್ಪಿ ಕೋಡ್ -CNRB0010173
Bank -canara bank nauvnda

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

3 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago