ಉಡುಪಿ

ಮಲ್ಪೆ:ವಿಶ್ವ ಸಮುದ್ರ ಸ್ವಚ್ಛತಾ ದಿನಾಚರಣೆ

Share

ಉಡುಪಿ:ರೀಫ್ ವಾಚ್ ಮರೈನ್ ಕನ್ಸರ್ವೇಷನ್,ಹೆಚ್.ಸಿ. ಎಲ್ ಫೌಂಡೇಶನ್, ಅರಣ್ಯ ಇಲಾಖೆ ಮತ್ತು ಉಡುಪಿ ನಗರ ಸಭೆ,ಫಿಷರ್ಮೆನ್ ಅಸೋಸಿಯೇಷನ್ ವತಿಯಿಂದ ವಿಶ್ವ ಸಮುದ್ರ ದಿನಾಚರಣೆ ಅಂಗವಾಗಿ ಮಲ್ಪೆಯಲ್ಲಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನಗರ ಪಾಲಿಕೆಯ ಆಯುಕ್ತರಾದ ರಾಯಪ್ಪ ಅವರು ಸಾಂದರ್ಭಿಕ ಕಡಲಾಮೆಯನ್ನು ಬಲೆಗಳಿಂದ ರಕ್ಷಿಸುವ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿ,ತಾಜ್ಯಗಳನ್ನು ಮನೆಯಲ್ಲೇ ಸುಲಭ ರೀತಿಯಲ್ಲಿ ವಿಲೇವಾರಿ ಮಾಡಬಹುದು ಎಂದರು.
ಈ ವೇಳೆ ಮಾತನಾಡಿದ ನಗರ ಸಭೆಯ ಸದಸ್ಯರಾದ ಯೆಡ್ಲೀನ್ ಕರ್ಕಡ ಅವರು ಕಡಲ ತೀರದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ಇದರಿಂದ ಆದರೂ ಸ್ವಲ್ಪಮಟ್ಟಿಗೆ ಅರಿವು ಆಗಬೇಕು ಎಂದರು.
ಇನ್ನೋರ್ವ ನಗರ ಸಭೆಯ ಸದಸ್ಯರಾದ ಶ್ರೀಲಕ್ಷ್ಮೀ ಮಂಜುನಾಥ್ ಅವರು ಮಾತನಾಡಿ ,ತಾಜ್ಯ ವಿಲೇವಾರಿಗೆ ಬಗ್ಗೆ ಸ್ಥಳೀಯ ಜನರಿಗೆ ಅರಿವು ಮೂಡಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ದಯಾನಂದ ಕೆ ಸುವರ್ಣ ಅವರು ತಾಜ್ಯಗಳ ಸಮಸ್ಯೆ ತಮ್ಮ ಬಾಲ್ಯದಲ್ಲಿ ಇರಲಿಲ್ಲ ಆದರೆ ಈಗ ಇದೊಂದು ಸಮಸ್ಯೆಯಾಗಿಹೋಗಿದೆ ಇಂದಿನ ಯುವ ಜನರು ಜಗೃತರಾಗಬೇಕು ಇದರಿಂದ ಕಾರ್ಯ ಪ್ರವೃತರಾಗಬೇಕು ಎಂದರು.
ಇದೆ ವೇಳೆ ರೋಹಿತ್ ಬೈಕಾಡಿ ಅವರ ನಿರ್ದೇಶನದಲ್ಲಿ ಮಂದಾರ ತಂಡವು ಕಡಲಾಮೆ ಮತ್ತು ಕಡಲ ಜೀವಿ ರಕ್ಷಣೆಯ ಕಿರು ನಾಟಕ ರಂಗ ಪ್ರಯೋಗ ಮಾಡಿತು,ನಂತರ ಸಮುದ್ರದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ,ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಗುರುರಾಜ್ ಮತ್ತು ಫಿಶರ್ಮೆನ್ ನ ರವಿರಾಜ್ ಅವರು ಶುಭಹಾರೈಸಿದರು ಇದೆ ವೇಳೆ ಬಾಲಕರ ಶ್ರೀ ರಾಮ ಮಂದಿರದ ಲಕ್ಷ್ಮಣ ಕರ್ಕೇರ,ಸಂತೋಷ್ ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ನ ಉಪನ್ಯಾಸಕರು ಮತ್ತು ಮಕ್ಕಳು,ನಾರಾಯಣ ಗುರು ಪ್ರೌಢ ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು ಶ್ರಮದಾನ ಮಾಡಿದರು.
ಈ ವೇಳೆ ರೀಫ್ ವಾಚ್ ನ ರಿವಿಲ್ ಸ್ಟೀಫನ್ ಅವರು ಪ್ರಾಸ್ತಾವಿಕ ಮಾತನಾಡಿದರೆ ವಿಘ್ನೇಶ್ ಅವರು ನಿರೂಪಿಸಿ,ವೆಂಕಟೇಶ್ ಅವರು ವಂದಿಸಿದರು.

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 weeks ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 weeks ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

1 month ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

1 month ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

2 months ago