ಉಡುಪಿ

ಮಲ್ಪೆ:ವಿಶ್ವ ಸಮುದ್ರ ಸ್ವಚ್ಛತಾ ದಿನಾಚರಣೆ

Share

Advertisement
Advertisement
Advertisement

ಉಡುಪಿ:ರೀಫ್ ವಾಚ್ ಮರೈನ್ ಕನ್ಸರ್ವೇಷನ್,ಹೆಚ್.ಸಿ. ಎಲ್ ಫೌಂಡೇಶನ್, ಅರಣ್ಯ ಇಲಾಖೆ ಮತ್ತು ಉಡುಪಿ ನಗರ ಸಭೆ,ಫಿಷರ್ಮೆನ್ ಅಸೋಸಿಯೇಷನ್ ವತಿಯಿಂದ ವಿಶ್ವ ಸಮುದ್ರ ದಿನಾಚರಣೆ ಅಂಗವಾಗಿ ಮಲ್ಪೆಯಲ್ಲಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Advertisement

ನಗರ ಪಾಲಿಕೆಯ ಆಯುಕ್ತರಾದ ರಾಯಪ್ಪ ಅವರು ಸಾಂದರ್ಭಿಕ ಕಡಲಾಮೆಯನ್ನು ಬಲೆಗಳಿಂದ ರಕ್ಷಿಸುವ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿ,ತಾಜ್ಯಗಳನ್ನು ಮನೆಯಲ್ಲೇ ಸುಲಭ ರೀತಿಯಲ್ಲಿ ವಿಲೇವಾರಿ ಮಾಡಬಹುದು ಎಂದರು.
ಈ ವೇಳೆ ಮಾತನಾಡಿದ ನಗರ ಸಭೆಯ ಸದಸ್ಯರಾದ ಯೆಡ್ಲೀನ್ ಕರ್ಕಡ ಅವರು ಕಡಲ ತೀರದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ಇದರಿಂದ ಆದರೂ ಸ್ವಲ್ಪಮಟ್ಟಿಗೆ ಅರಿವು ಆಗಬೇಕು ಎಂದರು.
ಇನ್ನೋರ್ವ ನಗರ ಸಭೆಯ ಸದಸ್ಯರಾದ ಶ್ರೀಲಕ್ಷ್ಮೀ ಮಂಜುನಾಥ್ ಅವರು ಮಾತನಾಡಿ ,ತಾಜ್ಯ ವಿಲೇವಾರಿಗೆ ಬಗ್ಗೆ ಸ್ಥಳೀಯ ಜನರಿಗೆ ಅರಿವು ಮೂಡಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ದಯಾನಂದ ಕೆ ಸುವರ್ಣ ಅವರು ತಾಜ್ಯಗಳ ಸಮಸ್ಯೆ ತಮ್ಮ ಬಾಲ್ಯದಲ್ಲಿ ಇರಲಿಲ್ಲ ಆದರೆ ಈಗ ಇದೊಂದು ಸಮಸ್ಯೆಯಾಗಿಹೋಗಿದೆ ಇಂದಿನ ಯುವ ಜನರು ಜಗೃತರಾಗಬೇಕು ಇದರಿಂದ ಕಾರ್ಯ ಪ್ರವೃತರಾಗಬೇಕು ಎಂದರು.
ಇದೆ ವೇಳೆ ರೋಹಿತ್ ಬೈಕಾಡಿ ಅವರ ನಿರ್ದೇಶನದಲ್ಲಿ ಮಂದಾರ ತಂಡವು ಕಡಲಾಮೆ ಮತ್ತು ಕಡಲ ಜೀವಿ ರಕ್ಷಣೆಯ ಕಿರು ನಾಟಕ ರಂಗ ಪ್ರಯೋಗ ಮಾಡಿತು,ನಂತರ ಸಮುದ್ರದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ,ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಗುರುರಾಜ್ ಮತ್ತು ಫಿಶರ್ಮೆನ್ ನ ರವಿರಾಜ್ ಅವರು ಶುಭಹಾರೈಸಿದರು ಇದೆ ವೇಳೆ ಬಾಲಕರ ಶ್ರೀ ರಾಮ ಮಂದಿರದ ಲಕ್ಷ್ಮಣ ಕರ್ಕೇರ,ಸಂತೋಷ್ ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ನ ಉಪನ್ಯಾಸಕರು ಮತ್ತು ಮಕ್ಕಳು,ನಾರಾಯಣ ಗುರು ಪ್ರೌಢ ಶಾಲೆಯ ಅಧ್ಯಾಪಕರು ಮತ್ತು ಮಕ್ಕಳು ಶ್ರಮದಾನ ಮಾಡಿದರು.
ಈ ವೇಳೆ ರೀಫ್ ವಾಚ್ ನ ರಿವಿಲ್ ಸ್ಟೀಫನ್ ಅವರು ಪ್ರಾಸ್ತಾವಿಕ ಮಾತನಾಡಿದರೆ ವಿಘ್ನೇಶ್ ಅವರು ನಿರೂಪಿಸಿ,ವೆಂಕಟೇಶ್ ಅವರು ವಂದಿಸಿದರು.

Advertisement
Advertisement

Share
Team Kundapur Times

Recent Posts

ಬ್ಯಾಗ್ ಮರಳಿಸುವಂತೆ ಮನವಿ

ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ…

2 weeks ago

ಕುಂದಾಪುರ\ತೀರ್ಥಹಳ್ಳಿ:ಸ್ಕೂಟಿಗೆ ಬಸ್ ಡಿಕ್ಕಿ,ವ್ಯಕ್ತಿ ಸಾವು

ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ…

2 weeks ago

ಆಲಸ್ಯಕರ ಜೀವನ ಪದ್ಧತಿಯಿಂದ ಹಣದುಬ್ಬರ ಏರಿಕೆ, ದುಡಿಯುವ ಕೈಗಳಿಂದ ಅಭಿವೃದ್ಧಿ:ಡಾ. ಹೆಚ್.ಎಸ್.ಶೆಟ್ಟಿ

ಕುಂದಾಪುರ:ನಮ್ಮ ದೇಶದಲ್ಲಿ ಆಹಾರ ಹಣದುಬ್ಬರ ಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿದೆ.ಆಲಸ್ಯಕರ ಜೀವನ…

3 weeks ago

ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕುಂದಾಪುರದಲ್ಲಿ ಶುಭಾರಂಭ

ಕುಂದಾಪುರ:ಸಿಸಿಟಿವಿ ಮತ್ತು ಮಾನಿಟರಿಂಗ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಹೆಸರನ್ನು ಗಳಿಸಿರುವ ದಿಗಂತ ಶೆಟ್ಟಿ ಮತ್ತು ದಿಕ್ಷೀತ್ ಶೆಟ್ಟಿ ಮಾಲಿಕತ್ವದಲ್ಲಿ ಫಿಯರ್ಲೆಸ್…

3 weeks ago

ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ ಹೃದಯಘಾತದಿಂದ ನಿಧನ

ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ…

1 month ago

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ…

1 month ago