ಕುಂದಾಪುರ:ಗಾಂಜಾ,ಡ್ರಗ್ಸ್ನಂತಹ ಮಾದಕ ವಸ್ತುಗಳಿಗೆ ಯುವಕರು ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಛತ್ತೀಸ್ಗಢ ರಾಯಭಾಗ್ ಮೂಲದ ನಿವಾಸಿ ನೇಮ್ ಕುಮಾರ್ ಎನ್ನುವ ಯುವಕ ಸೈಕಲ್ನಲ್ಲೆ ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ವಿರುದ್ಧ ಅಭಿಯಾನವನ್ನು ಕೈಗೊಂಡಿದ್ದಾರೆ.
ಕಳೆದ 75 ದಿನಗಳ ಹಿಂದೆ ಛತ್ತೀಸ್ಗಢ ರಾಯಭಾಗ್ನಿಂದ ಸೈಕಲ್ ಮೂಲಕ ತೆರಳಿದ್ದ ನೇಮ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದಿದ್ದ ಅವರು ಬುಧವಾರ ಕುಂದಾಪುರ ತಾಲೂಕನ್ನು ಪ್ರವೇಶ ಮಾಡಿದ್ದಾರೆ.ಈ ಸೈಕಲ್ ಅಭಿಯಾನ ಒಂದು ವರ್ಷಗಳ ಕಾಲ ಮುಂದುವರೆಯಲಿದ್ದು ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಉದ್ದೇಶವಾಗಿದೆ.ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಡ್ರಗ್ಸ್ ಅಭಿಯಾನದ ಅಂಗವಾಗಿ ಸಂವಾದವನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ನಗರಗಳಲ್ಲಿ ಕಂಡು ಬರುತ್ತಿದ್ದ ಡ್ರಗ್ಸ್ ಜಾಲ ಇತ್ತೀಚಿನ ವರ್ಷಗಳಲ್ಲಿ ಕುಂದಾಪುರ,ಬೈಂದೂರು ತಾಲೂಕಿನ ಹಳ್ಳಿಗಳ ಕಡೆಗೂ ವ್ಯಾಪಿಸಿರುವುದು ಆತಂಕದ ವಿಚಾರವಾಗಿದೆ.ಪೆÇಲೀಸ್ ಠಾಣೆಗಳಲ್ಲಿ ಕೇಸ್ಗಳು ದಾಖಲಾಗುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕಾಲೇಜು ವಿದ್ಯಾರ್ಥಿಗಳು,ಯುವ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ವ್ಯವಹಾರ ನಡೆಸುತ್ತಿರುವ ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು.ಚಾಕಲೇಟ್ ಸಿಗುವಷ್ಟು ಸುಲಭದಲ್ಲಿ ಗಾಂಜಾ,ಡ್ರಗ್ಸ್ನಂತಹ ಮಾದಕ ವಸ್ತುಗಳು ಯುವಕರ ಕೈ ಸೇರುತ್ತಿದೆ.ಹೆಣ್ಣು ಮಕ್ಕಳು ಕೂಡ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಹೆತ್ತವರ ಚಿಂತೆಗೆ ಕಾರಣವಾಗಿದೆ.
ಶೋಕಿ ಜೀವನಕ್ಕೆ ಯುವಕರು ಬಲಿ:ನಶೆಯನ್ನು ಏರಿಸಿಕೊಳ್ಳುವ ಗೀಳಿಗೆ ಬಿದ್ದ ಯುವ ಸಮುದಾಯ ತಮ್ಮ ಜೀವನದ ಸುಂದರ ದಿನಗಳನ್ನು ಕಳೆದುಕೊಳ್ಳುತ್ತಿರುವುದು ಮಾತ್ರವಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನ ಕಂಬಿಗಳನ್ನು ಏಣಿಸಿಸುವುದರ ಜತೆಗೆ ಮಾನಸಿಕ ಖಿನ್ನತೆ ಅಂತಹ ರೋಗಗಳಿಗೆ ತುತ್ತಾಗಿ,ಆತ್ಮಹತ್ಯೆಗಳಂತಹ ಕೃತ್ಯಗಳಿಗೂ ಬಲಿಯಾಗುತ್ತಿದ್ದಾರೆ.ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗ ಬಾರದೆಂದು ಪೊಲೀಸ್ ಇಲಾಖೆ ಮನವಿಯನ್ನು ಮಾಡಿಕೊಳ್ಳುತ್ತಿದೆ.
(ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು:ಶೋಕಿ ಜೀವನಕ್ಕೆ ಯುವ ಸಮುದಾಯ ಬಲಿ)
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…