ಬೆಂಗಳೂರು:ರಷ್ಯಾದಲ್ಲಿ ಬಂಡಾಯವೆದ್ದಿರುವ ಖಾಸಗಿ ಸೇನಾ ಗುಂಪಿನಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ಮೇಲಿನ ದಾಳಿ ಆರಂಭವಾದ ನಂತರ ರಷ್ಯಾದಲ್ಲಿ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಖಾಸಗಿ ಸೇನಾ ಗುಂಪು (ಮರ್ಸಿನರಿ) ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ತಮ್ಮ ಪಡೆಯು 25,000 ಸೈನಿಕರೊಂದಿಗೆ ರಷ್ಯಾದೊಳಗೆ ನುಗ್ಗಿದೆ ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ಸೇನಾ ನಾಯಕತ್ವವನ್ನು ಉರುಳಿಸುವ ಪ್ರಯತ್ನವಾಗಿ ತನ್ನ ಸಶಸ್ತ್ರ ಪಡೆಗಳನ್ನು ಮಾಸ್ಕೋದ ಕಡೆ 1200 ಕಿಮೀ ದೂರದಿಂದ ಕಳುಹಿಸಲಾಗಿದೆ ಎಂದು ಪ್ರಿಗೊಝಿನ್ ಹೇಳಿದ್ದಾರೆ. ಸೇನಾ ಬೆಂಗಾವಲು ಉಕ್ರೇನ್ ಗಡಿ ಸಮೀಪದ ಯುರೋಪಿಯನ್ ರಷ್ಯಾದ ದಕ್ಷಿಣ ಭಾಗ ಹಾಗೂ ಮಾಸ್ಕೋವನ್ನು ಸಂಪರ್ಕಿಸುವ ಮಾರ್ಗದಲ್ಲಿ ತೆರಳುತ್ತಿದ್ದು, ಜನರು ಅಲ್ಲಿಂದ ದೂರ ಇರಬೇಕು ಎಂದು ರಷ್ಯಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಟೆಲಿಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ವ್ಯಾಗ್ನರ್ ಮುಖ್ಯಸ್ಥ ಪ್ರಿಗೊಝಿನ್, ತಾವು ದಕ್ಷಿಣ ಏಷ್ಯಾದ ರೋಸ್ತೊವ್ ಆನ್ ಡಾನ್ನಲ್ಲಿನ ಸೇನಾ ಕೇಂದ್ರ ಕಚೇರಿ ಒಳಗೆ ಇರುವುದಾಗಿ ಮತ್ತು ತಮ್ಮ ಪಡೆಯು ನಗರದ ಸೇನಾ ನೆಲೆಗಳ ಮೇಲೆ ನಿಯಂತ್ರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಉಕ್ರೇನ್ ಭಾಗದಿಂದ ರಷ್ಯಾ ಒಳಗೆ ತಮ್ಮ ಸೇನೆ ಪ್ರವೇಶಿಸಿರುವುದಾಗಿ ಅವರು ಇದಕ್ಕೂ ಮೊದಲು ಹೇಳಿದ್ದರು. ತಾವು ಹಾಗೂ ತಮ್ಮ ಸಾವಿರಾರು ಸೈನಿಕರು ಸಾಯಲು ಸಿದ್ಧ ಎಂದಿದ್ದರು.
ವ್ಯಾಗ್ನರ್ ವಿರುದ್ಧ ಪುಟಿನ್ ಆಕ್ರೋಶ
ಇದು ಆಂತರಿಕ ವಿಶ್ವಾಸಘಾತುಕತನ ಎಂದು ಕಿಡಿಕಾರಿರುವ ವ್ಲಾಡಿಮಿರ್ ಪುಟಿನ್, ಬಂಡಾಯ ಎದ್ದಿರುವವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ರೋಸ್ತೊವ್ನಲ್ಲಿರುವ ಸನ್ನಿವೇಶವು ಬಹಳ ‘ಕ್ಲಿಷ್ಟಕರ’ವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…