ಬೆಂಗಳೂರು:ರಷ್ಯಾದಲ್ಲಿ ಬಂಡಾಯವೆದ್ದಿರುವ ಖಾಸಗಿ ಸೇನಾ ಗುಂಪಿನಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ಮೇಲಿನ ದಾಳಿ ಆರಂಭವಾದ ನಂತರ ರಷ್ಯಾದಲ್ಲಿ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಖಾಸಗಿ ಸೇನಾ ಗುಂಪು (ಮರ್ಸಿನರಿ) ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ತಮ್ಮ ಪಡೆಯು 25,000 ಸೈನಿಕರೊಂದಿಗೆ ರಷ್ಯಾದೊಳಗೆ ನುಗ್ಗಿದೆ ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ಸೇನಾ ನಾಯಕತ್ವವನ್ನು ಉರುಳಿಸುವ ಪ್ರಯತ್ನವಾಗಿ ತನ್ನ ಸಶಸ್ತ್ರ ಪಡೆಗಳನ್ನು ಮಾಸ್ಕೋದ ಕಡೆ 1200 ಕಿಮೀ ದೂರದಿಂದ ಕಳುಹಿಸಲಾಗಿದೆ ಎಂದು ಪ್ರಿಗೊಝಿನ್ ಹೇಳಿದ್ದಾರೆ. ಸೇನಾ ಬೆಂಗಾವಲು ಉಕ್ರೇನ್ ಗಡಿ ಸಮೀಪದ ಯುರೋಪಿಯನ್ ರಷ್ಯಾದ ದಕ್ಷಿಣ ಭಾಗ ಹಾಗೂ ಮಾಸ್ಕೋವನ್ನು ಸಂಪರ್ಕಿಸುವ ಮಾರ್ಗದಲ್ಲಿ ತೆರಳುತ್ತಿದ್ದು, ಜನರು ಅಲ್ಲಿಂದ ದೂರ ಇರಬೇಕು ಎಂದು ರಷ್ಯಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಟೆಲಿಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ವ್ಯಾಗ್ನರ್ ಮುಖ್ಯಸ್ಥ ಪ್ರಿಗೊಝಿನ್, ತಾವು ದಕ್ಷಿಣ ಏಷ್ಯಾದ ರೋಸ್ತೊವ್ ಆನ್ ಡಾನ್ನಲ್ಲಿನ ಸೇನಾ ಕೇಂದ್ರ ಕಚೇರಿ ಒಳಗೆ ಇರುವುದಾಗಿ ಮತ್ತು ತಮ್ಮ ಪಡೆಯು ನಗರದ ಸೇನಾ ನೆಲೆಗಳ ಮೇಲೆ ನಿಯಂತ್ರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಉಕ್ರೇನ್ ಭಾಗದಿಂದ ರಷ್ಯಾ ಒಳಗೆ ತಮ್ಮ ಸೇನೆ ಪ್ರವೇಶಿಸಿರುವುದಾಗಿ ಅವರು ಇದಕ್ಕೂ ಮೊದಲು ಹೇಳಿದ್ದರು. ತಾವು ಹಾಗೂ ತಮ್ಮ ಸಾವಿರಾರು ಸೈನಿಕರು ಸಾಯಲು ಸಿದ್ಧ ಎಂದಿದ್ದರು.
ವ್ಯಾಗ್ನರ್ ವಿರುದ್ಧ ಪುಟಿನ್ ಆಕ್ರೋಶ
ಇದು ಆಂತರಿಕ ವಿಶ್ವಾಸಘಾತುಕತನ ಎಂದು ಕಿಡಿಕಾರಿರುವ ವ್ಲಾಡಿಮಿರ್ ಪುಟಿನ್, ಬಂಡಾಯ ಎದ್ದಿರುವವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ರೋಸ್ತೊವ್ನಲ್ಲಿರುವ ಸನ್ನಿವೇಶವು ಬಹಳ ‘ಕ್ಲಿಷ್ಟಕರ’ವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀಶಂಕರಾಚಾರ್ಯ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ "ಐಕ್ಯಂ" 2025 ಅದ್ದೂರಿಯಿಂದ ನಡೆಯಿತು.ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ…
ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು…
ಉಡುಪಿ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ವಿದ್ಯಾರ್ಥಿಗಳಿಂದ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಭರತ ನಾಟ್ಯ ಪ್ರದರ್ಶನ ನಡೆಯಿತು.ವಿದ್ಯಾರ್ಥಿಗಳು ಹೆಜ್ಞೆ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ…
ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ…