ಕುಂದಾಪುರ

ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂರ್ಜುಲಿ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡಸೇವೆ

Share

Advertisement
Advertisement
Advertisement
(ಪಂಜುರ್ಲಿ)

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ವರ್ಷಂಪ್ರತಿ ನಡೆಯುವ ಶ್ರೀ ದೇವರ ವಾರ್ಷಿಕ ಗೆಂಡಸೇವೆ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಮತ್ತು ಹಣ್ಣುಕಾಯಿ ಸೇವೆ ಹಾಗೂ ತುಲಾಭಾರ ಸೇವೆ,ದೈವದರ್ಶನ ಸೇವೆ,ಹರಕೆ ಕೋಲ ಜರುಗಿತು.
ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕಷ್ಟ ಕಾಲದಲ್ಲಿ ಹೇಳಿ ಕೊಂಡ ಹರಕೆಯನ್ನು ಸಲ್ಲಿಸಿದರು.
ವಾರ್ಷಿಕ ಹಬ್ಬದ ಅಂಗವಾಗಿ ದೈವಸ್ಥಾನವನ್ನು ಹೂವಿನ ಅಲಂಕಾರ ಮತ್ತು ದೀಪಾಲಂಕಾರದಿಂದ ಶೃಂಗರಿಸಲಾಯಿತು.
ಬಂಟರಗರಡಿ,ಹೋರ್ ಬೊಬ್ಬರ್ಯ ಹಾಗೂ ನೇತ್ರ ಹ್ಯಾಗುಳಿ ದೈವಸ್ಥಾನದ ದೈವಗಳು ಜತೆಯಾಗಿ ಕೊಡಿ ನೀರಿಗೆ ಅರ್ಚಕರ ಮನೆಗೆ ಹೊಗುವುದು ವಿಶೇಷವಾಗಿದೆ.ಚಂಡೆ ಡೋಲು ವಾದ್ಯ ಘೋಷದೊಂದಿಗೆ ದೈವವನ್ನು ಮೆರವಣಿಗೆ ಮೂಲಕ ಕೊಡಿ ನೀರಿಗೆ ಭಕ್ತ ಸಮೂಹವು ಬರಮಾಡಿ ಕೊಳ್ಳುತ್ತಾರೆ.
ಹೊಳ್ಮಗೆ ಶ್ರೀ ಬಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ದೈವಸ್ಥಾನದ ಕಾರ್ಯದರ್ಶಿ ಚಂದ್ರಹಾಸ ಮಾತನಾಡಿ,400 ವರ್ಷಗಳ ಕಾಲ ಇತಿಹಾಸವನ್ನು
ಹೊಂದಿರುವ ದೈವಸ್ಥಾನವೂ ಬಹಳಷ್ಟು ಪುರಾತನ ದೈವಸ್ಥಾನಗಳಲ್ಲಿ ಒಂದಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ 66 ಗರಡಿಯಲ್ಲಿ ಇದು ಸಹ ಒಂದು ಗರಡಿ ಆಗಿದೆ.ತುಂಬಾ ಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಇತ್ತಿಚಿಗೆ ಪುನರ್ ನಿರ್ಮಾಣ ಮಾಡಲಾಗಿದೆ ಎಂದರು.ಬಂಟರಗರಡಿ,
ಹೋರ್ ಬೊಬ್ಬರ್ಯ,ನೇತ್ರ ಹೈಗುಳಿ ದೈವಸ್ಥಾನದ ಹಬ್ಬ ಒಟ್ಟಿಗೆ ನಡೆಯುವುದು ವಿಶೇಷವಾಗಿದೆ ಎಂದರು.
ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಸೂರ ಮೊಗವೀರ ಅವರು ಮಾತನಾಡಿ,ವಾರ್ಷಿಕ ಗೆಂಡ ಸೇವೆ ಜತೆಗೆ ಹಾಲುಹಬ್ ವಿಶೇಷವಾದ ರೀತಿಯಲ್ಲಿ ನಡೆಯುತ್ತದೆ.ದೈವವನ್ನು ನಂಬಿದ ಕುಟುಂಸ್ಥರು ಉತ್ತರೋತ್ತರವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಪಂಜುರ್ಲಿ ದೈವದ ಕಾರಣಿಕ ಶಕ್ತಿಗೆ ಸಾಕ್ಷಿಭೂತವಾಗಿದೆ.ಪಂಜುರ್ಲಿ ಮಾತಾಡಿ ಹಾಳು ಮಾಡುವುದಿಲ್ಲ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ.ದೈವಸ್ಥಾವನ್ನು ಅಭಿವೃದ್ಧಿಗೊಳಿಸಲು ಹೊದಂತಹ ಸಂದರ್ಭದಲ್ಲಿ ದೈವವೇ ಮುಂದೆ ನಿಂತು ಎಲ್ಲಾ ಕೆಲಸವನ್ನು ಮಾಡಿಸಿಕೊಂಡಿದೆ ಎಂದು ಕ್ಷೇತ್ರದ ಮಹಿಮೆ ಬಗ್ಗೆ ವಿವರಿಸಿದರು.
ಮೂರು ದೈವಸ್ಥಾನಗಳ ಸಮಿತಿ ಒಳ್ಳೆ ರೀತಿ ಕೂಡುವಿಕೆ ಯಿಂದ ನಡೆದುಕೊಂಡು ಹೋಗುತ್ತಿದೆ.ಬಂಟರ ಗರಡಿ ದೈವಸ್ಥಾನದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಬೇಕೆನ್ನುವ ಆಶೆಯನ್ನು ಹೊಂದಿದ್ದು ಭಕ್ತರು ನಮ್ಮ ಜತೆ ಕೈ ಜೋಡಿಸಬೇಕು
ಎಂದು ಹೇಳಿದರು.ಈ ಸಂದರ್ಭದಲ್ಲಿ ದೈವಸ್ಥಾನದ
ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಸ್ಮಗೆ,ಅರ್ಚಕರಾದ
ಸಂಜೀವ ಪೂಜಾರಿ,ಸದಸ್ಯರಾದ ಸತೀಶ ಪೂಜಾರಿ
ಕುಂದಬಾರಂದಾಡಿ,
ಭಾಸ್ಕರ ಪೂಜಾರಿ,ಗ್ರಾಮಸ್ಥರು,ಭಕ್ತಾದಿಗಳು
ಉಪಸ್ಥಿತರಿದ್ದರು.

Advertisement

ವರದಿ: ಜಗದೀಶ್ ದೇವಾಡಿಗ ಮುಳ್ಳಿಕಟ್

9916284048

Advertisement
Advertisement

Share
Team Kundapur Times

Recent Posts

ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…

2 days ago

ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ

ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…

3 days ago

ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…

6 days ago

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…

7 days ago

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…

7 days ago

ವ್ಯಾಯಾಮ ಮತ್ತು ಯೋಗಾಸನ ನಡುವಿನ ವ್ಯತ್ಯಾಸ ಕಾರ್ಯಕ್ರಮ ಚಂದನ ಟಿವಿಯಲ್ಲಿ ನೇರ ಪ್ರಸಾರ

ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…

2 weeks ago