ಕುಂದಾಪುರ:ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿರುವ ಕರಾವಳಿ ದೊನ್ನೆ ಬಿರಿಯಾನಿ ಔಟ್ಲೆಟ್ ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಸೆಳೆಕೋಡು ಅವರ ಮಾಲೀಕತ್ವದಲ್ಲಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ (ರಾಷ್ಟ್ರೀಯ ಹೆದ್ದಾರಿ 66 ರ) ನಗು ಸಿಟಿ ಮುಂಭಾಗ ಶನಿವಾರ ಅದ್ಧೂರಿಯಾಗಿ ಶುಭಾರಂಭಗೊಂಡಿದೆ.
ಹೋಟೆಲ್ ಉದ್ಯಮದಲ್ಲಿ ಸುಮಾರು 25 ವರ್ಷಗಳಷ್ಟು ಅನುಭವನ್ನು ಹೊಂದಿರುª ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಮಾಲೀಕತ್ವದ ಕರಾವಳಿ ದೊನ್ನೆ ಬಿರಿಯಾನಿ ಸಹಿತ ಎಲ್ಲಾ ರೀತಿಯ ಸೀಫುಡ್,ನಾಟಿ ಸ್ಟೈಲ್ನಲ್ಲಿ ಚಿಕ್ಕನ್ ಮತ್ತು ಮಟನ್ ಬಿರಿಯಾನಿ,ಚೈನಿಸ್, ಮೀನು ಊಟ ನುರಿತ ಬಾಣಸಿಗರಿಂದ ತಯಾರಾಗಲಿದೆ.ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಮಗ್ಗುಲಿನಲ್ಲಿರುವ ಕರಾವಳಿ ದೊನ್ನೆ ಬಿರಿಯಾನಿ ಪಾಯಿಂಟ್ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಖಾದ್ಯವನ್ನು ಸವಿಯಲು ಹೇಳಿಮಾಡಿಸಿದಂತ ಜಾಗ.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ,ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನು ಹೊಂದಿರುವ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಪ್ರದೇಶಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನರು ದಿನಂಪ್ರತಿ ಭೇಟಿಯನ್ನು ನೀಡುತ್ತಾರೆ.ಪ್ರವಾಸಿಗರಿಗೆ ಉತ್ತಮ ರೀತಿಯ ಊಟೋಪಚಾರ ಮತ್ತು ಆತಿಥ್ಯವನ್ನು ನೀಡಲು ಕರಾವಳಿ ದೊನ್ನೆ ಬಿರಿಯಾನಿ ಹೇಳಿಮಾಡಿಸಿದ ಜಾಗವಾಗಿದೆ ಎಂದು ಶುಭಹಾರೈಸಿದರು.
ಕರಾವಳಿ ದೊನ್ನೆ ಬಿರಿಯಾನಿ ಮಾಲೀಕರಾದ ಶರತ್ ಶೆಟ್ಟಿ ಮಾತನಾಡಿ,ಹೋಟೆಲ್ ಉದ್ಯಮದಲ್ಲಿ ಸುಮಾರು ಇಪ್ಪತೈದು ವರ್ಷಗಳಷ್ಟು ಅನುಭವನ್ನು ಹೊಂದಿರುವ ನಾವು ಇಂದು ಮುಳ್ಳಿಕಟ್ಟೆಯಲ್ಲಿ ಕರಾವಳಿ ದೊನ್ನೆ ಬಿರಿಯಾನಿ ಎಂಬ ಹೋಟೆಲ್ ಆರಂಭಿಸಲಾಗಿದ್ದು.ಸೀ ಫುಡ್ ಸಹಿತ ಎಲ್ಲಾ ರೀತಿಯ ಖಾದ್ಯಗಳು ದೊರಕಲಿದೆ.ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿ ಕೊಂಡರು.
ಕರಾವಳಿ ದೊನ್ನೆ ಬಿರಿಯಾನಿ ಮಾಲೀಕರಾದ ಹರೀಶ್ ಶೆಟ್ಟಿ ಕೌಂಜೂರು ಮಾತನಾಡಿ,ನಮ್ಮೂರಿನಲ್ಲಿ ಕರಾವಳಿ ದೊನ್ನೆ ಬಿರಿಯಾನಿಯನ್ನು ಪರಿಚಯಿಸಬೇಕು ಎನ್ನುವ ದೃಷ್ಟಿಯಿಂದ ಇವೊಂದು ಉದ್ಯಮವನ್ನು ಆರಂಭಿಸಲಾಗಿದ್ದು.ಎಲ್ಲಾ ರೀತಿಯ ಖಾದ್ಯ ದೊರಕಲಿದೆ ತಾವೆಲ್ಲಾ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ,ಮುಳ್ಳಿಕಟ್ಟೆ ಅಂತಹ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತವಾದ ಹೋಟೆಲ್ ನಿರ್ಮಾಣ ಆಗಿರುವುದರಿಂದ ಒಂದಿಷ್ಟು ಜನರಿಗೆ ಉದ್ಯೋಗ ದೊರಕುವುದರ ಜತೆಗೆ,ಸುಚಿ ಮತ್ತು ರುಚಿಕರವಾದ ಊಟ ದೊರಕಲಿದೆ ಎಂದರು.ಯುವ ಉದ್ಯಮಿಗಳಿಗೆ ಶುಭಹಾರೈಸಿದರು.
ಹೋಟೆಲ್ ಶುಭಾರಂಭ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು,ಉದ್ಯಮಿಗಳು ಹಾಗೂ ಕಟ್ಟಡದ ಮಾಲೀಕರು,ಬಂಧು ಮಿತ್ರರು,ಸ್ನೇಹಿತರು,ಸ್ಥಳೀಯರು ಭೇಟಿ ನೀಡಿ ಶುಭಹಾರೈಸಿದರು.
ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ…
ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು…
ಕುಂದಾಪುರ:ಏಕಏಕಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಒಳಪಟ್ಟಿರುವ ತಲ್ಲೂರು ಉಪವಿಭಾಗದ ವ್ಯಾಪ್ತಿಯಲ್ಲಿನ ಹೆಮ್ಮಾಡಿ,ದೇವಲ್ಕುಂದ,ಆಲೂರು,ಬಡಾಕೆರೆ,ಗಂಗೊಳ್ಳಿ…
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ರಸ್ತೆಯನ್ನು…
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…